ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಿ:01/07/2021 ರಿಂದ 31/07/2021ರವರೆಗೆ “ಕನ್ನಡ ಕಾದಂಬರಿ: ಜೀವನಯಾನ” ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು 31 ದಿನ 31 ಕನ್ನಡ ಕಾದಂಬರಿಗಳ ಕುರಿತಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾ ರೆ. ಪ್ರತಿ ದಿನ ಸಂಜೆ: 5.30 ರಿಂದ ಅಕಾಡೆಮಿಯ ಪೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ಈ ಕಾರ್ಯಕ್ರಮ ವೀಕ್ಷಿಸಬಹುದು. ಆಧುನಿಕ ಕಾಲಘಟ್ಟದಲ್ಲಿ ಕಾದಂಬರಿಯು ಪ್ರಮುಖ ಸಾಹಿತ್ಯ ಪ್ರಕಾರವಾಗಿದ್ದು, ಬದುಕಿನ ಕುರಿತಾಗಿ ಬದುಕಿನ ಚಲನಶೀಲತೆ ಕುರಿತಾಗಿ ಅರ್ಥಪೂರ್ಣ ವಾಗಿ ತಿಳಿಸಿಕೊಡಬಲ್ಲದು. ಈ ಕಾರಣದಿಂದ ಮೇಲ್ಕಂಡ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಸಕ್ತರು ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಬಗ್ಗೆ ಅಕಾಡೆಮಿ ತನ್ನ ಪ್ರಕಟನೆ ಯಲ್ಲಿ ತಿಳಿಸಿದೆ.
ದೀಪ್ತಿ ಭದ್ರಾವತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು