“ಗುರು ಪೂರ್ಣಿಮೆ” ಗುರು ಎಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ದಿವಂತಿ ಕೆ ಮತ್ತು ನಿಪುಣತೆಯನ್ನು ಹೊಂದಿರುವ ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು(ಶಿಕ್ಷಕ) ಈ ಬುದ್ದಿವಂತಿಕೆಯನ್ನು ಬಳಸುವ ವ್ಯಕ್ತಿ. ಸಂಸ್ಕೃತ ದಲ್ಲಿ “ಗು”ಎಂದರೆ ಅಂಧಕಾರ “ರು” ಎಂದರೆ ಬೆಳಕು. ಅಂದರೆ,ಅರಿವಿನ ಅಭಿವೃದ್ದಿಯ ಒಂದು ಮೂಲತತ್ವವಾಗಿ ಈ ಪದ “ಅಜ್ಞಾನದ ಅಂಧ ಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯ ಯ್ಯುತ್ತದೆ” ಎಂಬ ಅರ್ಥವನ್ನು ನೀಡುತ್ತದೆ.

ಗೌತಮ ಬುದ್ಧ

ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀಗುರುವೇನಮ:

ಎಂದು ಪ್ರಾರ್ಥಿಸುವ ಪರಂಪರೆಯ ದೇಶ ನಮ್ಮ ದು. ವೇದ,ಉಪನಿಷತ್, ಕಾಲದಿಂದಲೂಗುರು” ವಿಗೆ ತನ್ನದೇ ಆದ ವೈಶಿಷ್ಟ್ಯತೆಯಿದೆ.

“ಮಾತೃದೇವೋಭವ, ಪಿತೃದೇವೋಭವ ಆಚಾರ್ಯ ದೇವೋಭವ”

ಎಂದು ನಾವು ಸಾರಿ ಸಾರಿ ಹೇಳುತ್ತೇವೆ.

ಪರುಷ ಲೋಹವ ಮುಟ್ಟಿ ವರುಷವಿರಬಲ್ಲುದೇ ಪರಷವೆಂತಂತೆ ಶಿಷ್ಯಂಗೆ
ಗುರುವಿನ ಸ್ಪರುಶನವೆ ಮೋಕ್ಷ ಸರ್ವಜ್ಞ

ನಮ್ಮ ದೇಶದಲ್ಲಿ ಗುರುವಿಗೆ ಎಂಥಹ ಸ್ಥಾನವಿತ್ತು ಎಂದು ಇಂಥ ಉಕ್ತಿಗಳಿಂದ ತಿಳಿದು ಬರುತ್ತದೆ. ಮೊದಲು ವಿದ್ಯಾಭ್ಯಾಸ ಗುರುಕುಲಗಳಲ್ಲಿ ನಡೆ ಯುತ್ತಿತ್ತು. ಶಿಷ್ಯರು ಗುರುವಿನ ಜೊತೆಯಲ್ಲಿಯೇ ಇದ್ದು ಅವರ ಸೇವೆ ಮಾಡುತ್ತಾ ಯಜ್ಞ-ಯಾಗಾದಿ ಗಳಲ್ಲಿ ತೊಡಗಿ ಅವರಿಗೆ ನೆರವಾಗಿ ಅವರಿಂದ ವಿದ್ಯೆ ಕಲಿಯುತ್ತಿದ್ದರು. ಆಗ ವಿದ್ಯೆ ಕೇವಲ ಅಕ್ಷರಾಭ್ಯಾಸವಾಗಿರದೇ ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನ ತಿಳಿಯುವ ಮಾರ್ಗವಾಗಿತ್ತು. ಮಹಾರಾಜರಿಂದ ಹಿಡಿದು ಸಾಮಾನ್ಯ ಭಕ್ತನ ವರೆಗೂ “ಗುರು”ವಿಗೆ ತೋರುವ ನಿಷ್ಠೆ ಅನನ್ಯವಾ ದುದು.

ಮೊಸರ ಕಡೆಯಲು ಬೆಣ್ಣೆ ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶದಿಂ ಮುಕ್ತಿ ವಶವಾಗದಿಹುದೆ ಸರ್ವಜ್ಞ

ಜಗಜ್ಯೋತಿ ಬಸವೇಶ್ವರರು

ವಚನ ಯುಗದಲ್ಲಿನ ಎಲ್ಲ ವಚನಕಾರರು ಗುರು ಹಾಗೂ ಶಿಷ್ಯ ಸಂಬಂಧ ಕುರಿತು ತಮ್ಮದೇ ಆದ ನಿಲುವನ್ನು ಮಹತ್ವವನ್ನು ತಮ್ಮ ವಚನಗಳಲ್ಲಿ ಹೇಳಿರುವರು.

ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ
-ಬಸವಣ್ಣ

ಹೀಗೆ ಬಸವಣ್ಣನವರು ಗುರುವೆಂಬ ಬೀಜದಿಂದ ಲೇ ಲಿಂಗ,ವಿಚಾರ, ಆಚಾರಗಳು ಉದ್ಭವವಾಗಿವೆ ಯೆಂದು ಸದ್ಗುರುವಿನ ವಚನದಿಂದ ನಮಗೆ ಕಟ್ಟಿರುವ ಕಳಂಕದಿಂದ ಹೊರಬರಲು ಸಾಧ್ಯ ವೆಂಬುದನ್ನು ಹೇಳುತ್ತ:

” ಎನ್ನಗುರು ಪರಮಗುರು ನೀವೇ,
ಎನ್ನ ಗತಿ ಮತಿ ನೀವೆ,
ಎನ್ನ ಅರಿವಿನ ಜ್ಯೋತಿ ನೀವೆ,
ಎನ್ನಂತರಂಗದ ಬಹಿರಂಗದ ಮಹವು ನೀವೇ ಕಂಡಯ್ಯ ಕೂಡಲಸಂಗಮದೇವಾ”

ಅಕ್ಕಮಹಾದೇವಿ

ಎಂದು ಗುರುವಿನಲ್ಲಿ ಭಕ್ತಿಪೂರ್ವಕವಾಗಿ ಬೇಡಿ ಕೊಳ್ಳುತ್ತಾರೆ. ಗುರುವಿನ ಕರುಣೆ ಕೃಪೆಗಳಿಂದ ಭಕ್ತರ ಜೀವನದಲ್ಲಿಯ ಕಷ್ಟಗಳ ಪರಿಹಾರ ಸಾದ್ಯ ಎಂದು ಗುರುಮಹಿಮೆಯ ತಿಳಿಸಿರುವರು. ಶಿವ ಶರಣೆ ಅಕ್ಕಮಹಾದೇವಿಯು ಗುರುವನ್ನು ಅನೇಕ ವಿಧವಾಗಿ ಕೊಂಡಾಡಿರುವಳು.

ಅರಸಿ ಮೊರೆ ಪುಕ್ಕಡೆ ಕಾವ ಗುರುವೆ
ಜಯ ಜಯ ಗುರುವೆ
ಆರೂ ಅರಿಯದ ಬಯಲೊಳಗೆ
ಬಯಲಾಗಿ ನಿಂದ ನಿಲವ
ಹಿಡಿದೆನ್ನ ಕರದಲ್ಲಿ ತೋರಿದ ಗುರುವೆ
ಶ್ರೀ ಗುರುವಿನ ಸಾನಿದ್ಯದಿಂದ ನಾನು ಬದುಕಿದೆನೆಯ್ಯಾ
ಚೆನ್ನಮಲ್ಲಿಕಾರ್ಜುನಾ

ಎಂದು ಗುರುವಿಗೆ ಭಕ್ತಿಗೌರವಗಳನ್ನು ಅರ್ಪಿಸು ತ್ತಾಳೆ. ಶಿವ ಸಂಹಿತದಲ್ಲಿ ಗುರುವನ್ನು ವಿಮೋಚ ನೆಗೆ ಅಗತ್ಯವಿರುವ ಅಂಶವೆಂದು ಪವಿತ್ರವಾಗಿ ಗುರುತಿಸಲಾಗಿದೆ. ವಿಷ್ಣುಸ್ಮೃತಿ ಹಾಗೂ ಮನು ಸ್ಮೃತಿಗಳಲ್ಲಿಯೂ ಕೂಡ ಆಚಾರ್ಯರನ್ನು ತಂದೆ ಹಾಗೂ ತಾಯಿಯೊಂದಿಗೆ ಅತೀ ಗೌರವ ವ್ಯಕ್ತಿಗ ಳೆಂದು ಪರಿಗಣಿಸಲಾಗಿದೆ.

ನರಜನ್ಮವ ತೊಡೆದೆ ಹರಜನ್ಮವ ಮಾಡಿದ ಗುರುವೆ ನಮೋ:
ಭವಬಂಧವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ
ಭವಿಯೆಂಬುದ ತಡೆದು ಭಕ್ತಿಯೆಂದಿನಿಸಿದ ಗುರುವೆ ನಮೋ
ಚೆನ್ನಮಲ್ಲಿಕಾರ್ಜುನನ ತಂದೆನ್ನ
ಕೈವಶಕ್ಕೆ ಕೊಟ್ಟ ಗುರುವೆ ನಮೋ ನಮೋ

ಎಂದು ಅಕ್ಕಮಹಾದೇವಿಯು ತನ್ನ ಆದ್ಯಾತ್ಮಿಕ ಜೀವನದಲ್ಲಿ ಗುರುವಿನ ಪ್ರಭಾವ ಆಗಿರುವು ದೆಂದು ಗುರುವನ್ನು ಕೊಂಡಾಡಿರುವಳು.

“ಪರಮ ದೇವರಾಗಿರುವುದನ್ನು ಗ್ರಹಿಸಿಕೊಳ್ಳಲು ಒಬ್ಬ ಮನುಷ್ಯ ತನ್ನ ಸ್ವಯಂ ಅನ್ನು ಪರಮದೇವ ರಾಗಿರುವುದನ್ನು ಗ್ರಹಿಸಿಕೊಳ್ಳಲು ಒಬ್ಬ ಮನುಷ್ಯ ತನ್ನ ಸ್ವಯಂ ಅನ್ನು “ವೇದಗಳ” ರಹಸ್ಯಗಳನ್ನ ಅರಿತ ಗುರುವಿನ ಎದಿರು ಅರ್ಪಣೆ ಮಾಡಬೇಕು ಎಂದು “ಮುಂಡಕ್ ಉಪನಿಷತ್” ಹೇಳಿದೆ. ಗುರುವಿನ ಪಾತ್ರಕ್ಕೆ ಸಂಬಂಧಿಸಿದಂತೆ ಸ್ವಾಮಿ ಶಿವಾನಂದರು “ಮನುಷ್ಯನ ವಿಕಸನದಲ್ಲಿ ಗುರು ವಿನ ಪಾತ್ರದ ಪವಿತ್ರ ಪ್ರಾಮುಖ್ಯತೆ ಹಾಗೂ ಉನ್ನತ ಮಹತ್ವ ವನ್ನು ತಿಳಿದುಕೊಳ್ಳಿ, ಹಿಂದಿನ ಭಾರತ ಗುರುತತ್ವದ ದೀಪವನ್ನು ಜಾಗರೂಕವಾಗಿ ಆರೈಕೆ ಮಾಡುತ್ತಿತ್ತು ಮತ್ತು ಸಜೀವವಾಗಿತ್ತು. ದು:ಖ ಹಾಗೂ ಸಾವಿನ ಗುಲಾಮಗಿರಿಯನ್ನು ವೈಯುಕ್ತಿಕವಾಗಿ ಮೀರಲು ಮತ್ತು ಸತ್ಯಜ್ಞಾನದ ಅನುಭವ ಪಡೆಯಲು ಒಬ್ಬ ವ್ಯಕ್ತಿಗೆ ಗುರು ಏಕ ಮಾತ್ರ ಭರವಸೆ” ಎಂದು ಗುರು ಮಹತ್ವವನ್ನು ಸಾರಿದ್ದಾರೆ. ಇನ್ನು ಜ್ಞಾನ ವೈರಾಗ್ಯನಿಧಿ ಅಲ್ಲಮ ಪ್ರಭು ದೇವರು “ಅಂತರಂಗದ ಅರಿವಿನ ಗುರು ವಿಗೆ ಶಿಷ್ಯನಾದೊಡೆ ಭಕ್ತಿಯಿಂದ ಗುರುವಿನ ಮಾರ್ಗದರ್ಶನದಲ್ಲಿ ನಡೆಯುವಲ್ಲಿ ಬಹಿರ್ಮುಖ ದ ಅರಿವಿನೊಡನೆ ಬದುಕನ್ನು ಪಾವನಮಾಡಿ ಕೊಳ್ಳುವಲ್ಲಿ ಜೀವನದ ಸಾರ್ಥಕತೆಯಡಗಿದೆ” ಎಂಬುದನ್ನು ಈವಚನದಲ್ಲಿ ಉಲ್ಲೇಖಿಸಿರುವರು:

ಅಯ್ಯಾ ನೀನೆನಗೆ ಗುರುವಪ್ಪಡೆ
ನಾ ನಿನಗೆ ಶಿಷ್ಯನಪ್ಪಡೆ
ಎನ್ನ ಕರಣಾದಿ ಗುಣಂಗಳ ಕಳೆದು
ಎನ್ನ ಪ್ರಾಣದ ಧರ್ಮವ ನಿಲಿಸಿ
ನೀನೆನ್ನ ಕಾಯದಲಡಗಿ
ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡು ಗುಹೇಶ್ವರ

ಸಿದ್ಧರಾಮೇಶ್ವರರು

ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯ್ಯಾರಿ ಎಂಬುದನ್ನು ಹೇಳುವುದರ ಜೊತೆಗೆ “ಸಾವಿರಾರು ಸೂರ್ಯಚಂದ್ರರು ಹುಟ್ಟಿಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆ ಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ, ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಹೊಡೆದು ಹಾಕಲಾಗುತ್ತದೆ” ಎಂಬ ಗುರು ನಾನಕ್ ರ ನುಡಿಯನ್ನು ನೆನಪಿಸುತ್ತ ಕರ್ಮ ಯೋಗಿ ಸಿದ್ದರಾಮೇಶ್ವರರು ಗುರು ಕುರಿತ ವಚನ ದಲ್ಲಿ:

ಗುರುವೆ, ಇಹಪರ ಗುರುವೆ, ಗುರುವೆ ಕರುಣಾಕರನೆ,
ಗುರುವೆ,ಶುದ್ದಾತ್ಮನೆ ನಿರ್ಮಳಾಂಗ,
ಗುರುವೆ,ನಿನ್ನಂತೆ ಎನ್ನವನು ಮಾಡಿಹ
ಗುರುವೆ,ನೀನು ಕಪಿಲಸಿದ್ದಮಲ್ಲಿನಾಥ.

ಎಂದು ಗುರುವಿಗೆ ನಮನ ಸಲ್ಲಿಸಿರುವರು. ಗುರು ವಿನ ಕೃಪೆಯಿಂದ ಸಾಧಾರಣ ತನುವನ್ನುಮರೆದು, ಗುರುವಿನ ಶಿವಜ್ಞಾನವೆಂಬ ಬೆಳಕು ಪಡೆದು ಅಸಂಖ್ಯಾತ ಶರಣರೆಲ್ಲರ ಸಹವಾಸ ಉಪದೇಶಗ ಳಿಂದ ಅನುಭಾವಗೋಷ್ಠಿಗಳಿಂದ ಸಿದ್ದರಾಮರು ಗುರುನಮನವನ್ನು ತಮ್ಮ ವಚನದಲ್ಲಿ ಬಿಂಬಿಸಿ ರುವರು.

ಪಾಶ್ಚಾತ್ಯ ಬಳಕೆಯಲ್ಲಿ “ಗುರು”ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ ಎಂದಿರುವರು. ಒಬ್ಬ ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ “ಗುರು”ಎಂಬ ಶಬ್ದ ಬಳಸುತ್ತಾರೆ. “ಗುರು” ಎಂಬ ಶಬ್ದದ ಪದ ಉತ್ಪತ್ತಿ ಬಗ್ಗೆ “ಗುರು ಗೀತಾ” ದಲ್ಲಿ “ಗು”ಎಂದರೆ ಗುಣಗಳನ್ನು ಮೀರಿ:”ರು” ಎಂದರೆ ಆಕಾರರಹಿತ ಎಂದಿದ್ದಾರೆ. ಅಂತೆಯೇ ಭಕ್ತಿ,ಜ್ಞಾನ,ಕ್ರಿಯೆ, ವೈರಾಗ್ಯಗಳ. ಆದರ್ಶಮಯ ಸಮನ್ವಯವನ್ನು ಗುರುವಿನಲ್ಲಿ ಕಾಣಬಹುದು.
ಆಚಾರ ಗುರು,ಸಮಯ ಗುರು,ಜ್ಞಾನಗುರು”
ಆಚಾರ ಗುರು ಬ್ರಹ್ಮನ ಕಲ್ಪವ ತೊಡೆಯಬೇಕು,
ಸಮಯ ಗುರು ವಿಷ್ಣುವಿನ ಸ್ಥಿತಿಯ ಹರಿಯ ಬೇಕು, ಜ್ಞಾನ ಗುರು ಉತ್ಪತ್ತಿ, ಸ್ಥಿತಿ ಲಯ ಮೂರ ನ್ನೂ ಕಳೆಯಬೇಕು.

ತ್ರಿವಿಧಗುರು ಏಕವಾದಲ್ಲಿ ಸದ್ಗುರು, ಸದ್ಗುರು ಮಹಾಗುರುವೆಂಬೆ ನಿ:ಕಳಂಕ ಮಲ್ಲಿಕಾರ್ಜುನ

ಅಲ್ಲಮ ಪ್ರಭುಗಳು

ತರ್ಕಾತೀತ ಜ್ಞಾನ (ವಿದ್ಯೆ) ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂ ಮತ ದಲ್ಲಿ ಪ್ರಾಧಾನ್ಯ ನೀಡಲಾಗಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಅಥವಾ ಒಬ್ಬ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ. ಹಿಂದಿ ಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ ಬೃಹಸ್ಪತಿವಾರ ಅಥವಾ ಗುರುವಾರ (ವಾರವೆಂದ ರೆ ಸಪ್ತಾಹದ ಒಂದು ದಿನ) ಎಂದು ನಿಗದಿಗೊಳಿ ಸಿರುವರು. ಗುರು, ಲಿಂಗ, ಜಂಗಮ ಎಂಬ ಕಲ್ಪನೆಯಿಂದಲೇ ವಚನಸಾಹಿತ್ಯವು ಗುರುವಿನ ಮಹತ್ವ ಹಾಗೂ ಆ ಗುರುವನ್ನು ಅನುಸರಿಸುವ ಶಿಷ್ಯನ ಕರ್ತವ್ಯಗಳು ಎಲ್ಲ ವಿಷಯಗಳ ಕುರಿತು ಚರ್ಚೆ ನಡೆದಿದೆ. ಅಂತಹ ಕೆಲವು ವಚನಗಳನ್ನು‌ ಇಲ್ಲಿ ಕಾಣಬಹುದು. ಅಮುಗಿದೇವಯ್ಯನು ಗುರು ಹೇಗಿರಬೇಕೆನ್ನುವುದನ್ನು:

“ಗುರುವಾದಲ್ಲಿ ಶಿಷ್ಯ ಅಂಗದಲ್ಲಿ ಶಿಲೆಯಲ್ಲಿ ಉರಿಯಡಗಿದಂತಿರಬೇಕು ಎಂದು ಶಿಷ್ಯನ ಅಂತರಂಗವೇ ಗುರುವಿನ ಸ್ಥಾನ ಎಂದಿರುವನು “ಘಟದೊಳಗೆ ತೋರುವ ಸೂರ್ಯನಂತೆ” ಸರ್ವರಲ್ಲಿರುವ ಶಿವಚೈತನ್ಯವನ್ನು ಗುರುವಿಂದಲ್ಲದಾಗದು ಕಾಣಾ ಕಲಿದೇವರದೇವಾ”

ಎಂದು ಹೇಳುವ ಈ ವಚನವು ಗುರುವಿನ ಮೂಲಕವೇ ಆತನ ಚೈತನ್ಯವನ್ನು ಕಾಣಲು ಸಾಧ್ಯ ಎಂಬುದನ್ನು ಮನವರಿಕೆ ಮಾಡುತ್ತದೆ.

ಗುರು-ಶಿಷ್ಯರು ಬೇರೆ ಬೇರೆಯಾಗಿ ಕಾಣುತ್ತಾರೆ ಅಷ್ಟೆ. ಆದರೆ ಅಂಶತ:ಅವರರಿಬ್ಬರೂ ಬೇರೆಯಲ್ಲ ತನ್ನ ವಿನೋದಕ್ಕಾಗಿ ಗುರುವೆ ಶಿಷ್ಯನಾಗುತ್ತಾನೆ, ಶಿಷ್ಯನು ತನ್ನ ಆದ್ಯಾತ್ಮಿಕ ಸಾಧನೆ ಶಿವಾನುಭವದ ಸದಾಚರಣೆಗಳಿಂದ ಗುರುವಾಗಲು ಸಾದ್ಯ. ಇನ್ನು ನಿಜಗುಣ ಶಿವಯೋಗಿಗಳು ಶ್ರೀ ಗುರುವಿನ ವಚನ ಉಪದೇಶದಿಂದ ಮುಕ್ತಿ ಸಾಧ್ಯವೆಂಬುದನ್ನು ಬಹು ಮಾರ್ಮಿಕವಾಗಿ ಹೇಳಿರುವರು.

ಗುರುವಿಂಗೂ ಶಿಷ್ಯಂಗೂ ಆವುದ ದೂರ.?
ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ
ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ
…ಮುನ್ನಲಾದ ಪದತತ್ವಮಂ ತಿಳಿದು ನೋಡಲು
ನೀನೆ ಸ್ವಯಂಜ್ಯೋತಿ ಪ್ರಕಾಶವೆಂದರಿಯಲು
ನಿನಗೆ ನೀನೆ ಗುರುವಲ್ಲದೆ
ನಿನ್ನಿಂದಧಿಕ ಗುರುವುಂಟೇ.?
ಇದು ಕಾರಣ.
ಗುಹೇಶ್ವರ ಲಿಂಗವು ತಾನೆಂಬುದನು
ನಿನ್ನಿಂದ ನೀನೇ ಅರಿಯಬೇಕು ನೋಡಾ

ಶ್ರೀ ಗುರು ವಚನೋಪದೇಶವನಾಲಿಸಿ
ದಾಗಳಹುದು ನರರಿಗೆ ಮುಕುತಿ
ದುರಿತ ಕರ್ಮವನೊಲ್ಲದಿರು, ಪುಣ್ಯವನೆ ಮಾಡು
ಹರನಡಿವಿಡಿ,ಶಾಂತರೊಡನಾಡು
ಕರುಣವಿರಲಿ ಜೀವದೊಳು, ನೀತಿವದನನಾಗು

ಮುಂತಾದ ನೈತಿಕ ನಡೆನುಡಿಗಳನ್ನು ಕುರಿತು ತಿಳಿಸಿರುವರು.ಒಬ್ಬ ಉತ್ತಮ ಗುರುವನ್ನುಪಡೆದು ಕೊಳ್ಳುವುದು ಆತ್ಮಜ್ಞಾನ ಹೊಂದಲು ಒಂದು ಪೂರ್ವತಯಾರಿ ಎಂದು ಹೇಳಲಾಗುತ್ತದೆ. ವಿದ್ಯೆ ಯನ್ನು ಕಲಿಯಲು ಗುರುಸೇವೆ, ಗುರುವಿನಿಂದ ಪಡೆಯುವುದು ಅದರ ಪರಿಪಾಲನೆ ಎಲ್ಲವನ್ನು ವಚನಗಳಲ್ಲಿ ಅನೇಕ ವಚನಕಾರರು ಹೇಳಿರು ವರು. ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತತ್ವದಿಂದ ಅಮೃತತ್ವದೆಡೆಗೆ ಕರೆ ದೊಯ್ಯುವ ಜ್ಞಾನಜ್ಯೋತಿ ಗುರು. ಈ ಕಾರ್ಯಗೈ ಯ್ಯುವಾಗ ಶಿಕ್ಷೆಯೂ ಉಂಟು ರಕ್ಷೆಯು ಉಂಟು. ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಕೆಟ್ಟದನ್ನು ಶಿಕ್ಷಿಸುವ ಮೂಲಕ ಸರಿದಾರಿ ಗೆ ತರುವುದು ಗುರುವಿನ ಕರ್ತವ್ಯ.ಆದರೆ ಇಂದಿನ ದಿನಗಳಲ್ಲಿ ಅದು ದೂರವಾಗುತ್ತಿದೆ, ಗುರು ಶಿಷ್ಯ ಸಂಬಂಧಗಳು ಮೊದಲಿನಂತಿಲ್ಲ. ಇದನ್ನು ನೆನೆ ದಾಗ ಇಂದು ಕಂಡುಬರುತ್ತಿರುವ ಗುರು-ಶಿಷ್ಯರ ಸಂಬಂಧದ ಕುರಿತಾಗಿ ಬಹುಶ: ನಮ್ಮ  ಅಲ್ಲಮ ಪ್ರಭು ದೇವರು ಇಂದಿನದನ್ನು ಅಂದೇ ಕಂಡು ಕೊಂಡಿದ್ದರೇನೋ ಎಂಬಂತೆ ಇಂದಿನ ಸ್ಥಿತಿಯನ್ನ ಉಲ್ಲೇಖಿ ಬರೆದ ವಚನ:

ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ ಆಗಲಿ ಮಹಾಪ್ರಸಾದ ವೆಂದನಯ್ಯಾ, ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಯ್ದು ಬುದ್ದಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ, ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ದಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ, ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ದಿಯಕಲಿಸಿದರೆ ಆಗಲಿ ಮಹಾಪ್ರಸಾದ ವೆಂದನಯ್ಯಾ…ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು.

ಈ ವಚನವು ಕಾಲಾಂತರದಲ್ಲಿ ಗುರುಶಿಷ್ಯ ಸಂಬಂಧವು ಹೇಗೆ ಬದಲಾಗುತ್ತ ಹೋಗುತ್ತದೆ ಎಂಬುದನ್ನು ತುಂಬಾ ಮಾರ್ಮಿಕವಾಗಿ ಹೇಳಿರು ವದು. ಕಲಿಯುಗದಲ್ಲಿ ನಿಜಕ್ಕೂ ಇವರಿಬ್ಬರ ಸಂಬಂಧದಲ್ಲಿ ಸಡಿಲತೆ ಉಂಟಾಗಿರುವುದು “ಕೇವಲ ಉದ್ಯೋಗಕ್ಕಾಗಿಯೇ ಶಿಕ್ಷಣ ಕಲಿಯ ಬೇಕು” ಎಂಬ ವಾತಾವರಣ ಬೆಳೆಯುತ್ತಿರುವುದು ಕೂಡ ಕಾರಣವಿರಬಹುದು. ಮೌಲ್ಯಗಳ ಕೊರತೆ ಯೂ ಇದಕ್ಕೆ ಮುಖ್ಯ ಕಾರಣ. ಗಣಕಯಂತ್ರ, ಅಂತರ್ಜಾಲ, ಸೀಡಿ, ಪ್ಲಾಪಿ, ಇಂಟರ್ ನೆಟ್ ಮುಂತಾದವುಗಳ ಬಳಕೆ ಕೂಡ ಗುರುವಿನ ಮಾರ್ಗದರ್ಶನ, ಗುರು ಪ್ರಯತ್ನಗಳ ಕೊರತೆ ಯನ್ನು ಅಂದರೆ ಅದರ ಪರಿಚಯವಾದರೆ ಸಾಕು ತಮ್ಮದೇ ಲೋಕದಲ್ಲಿ ವಿಹರಿಸುವ ಸಂಸ್ಕೃತಿ ಕೂಡ ಗುರುಶಿಷ್ಯ ಪರಂಪರೆಯಲ್ಲಿ ಗೊಂದಲ ಮೂಡಲು ಕಾರಣವಾಗಿರಬಹುದು.

ಸರ್ವಜ್ಞ

ಇನ್ನು ಸರ್ವಜ್ಞ ಕೂಡ ಗುರುವನ್ನು ಕುರಿತು ತನ್ನ ತ್ರಿಪದಿ ಗಳಲ್ಲಿ ಈ ರೀತಿ ಹೇಳಿರುವನು:

ಮೂರು ಕಣ್ಣೀಶ್ವರನ ತೋರಿ ಕೊಡಬಲ್ಲಗುರು
ಬೇರದರೊಳೊಂದು ತೆರನಿಲ್ಲ ಗುರುಕರುಣ
ತೋರುವುದು ಹರನ ಸರ್ವಜ್ಞ

ಊರಿಂಗೆ ದಾರಿಯನು ಆರು ತೋರಿದಡೇನು
ಸಾರಯದ ನಿಜವು ತೋರುವ ಗುರು ತಾ
ನಾರಾದಡೇನು ಸರ್ವಜ್ಞ

ಹರತನ್ನೊಳಿರ್ದು ಗುರು,ತೋರದಿರೆ ತಿಳಿವುದೆ
ಮರದೊಳಗೆ ಅಗ್ನಿ ಇರುತಿರ್ದು ತನ್ನತಾ
ನರಿಯಬೇಕೆಂದ ಸರ್ವಜ್ಞ


ಸುರುತರವು ಮರವಲ್ಲ,ಸುರಭಿಯೊಂದಾವಲ್ಲ
ಪುರುಷ ಪಾಷಣ ದೊಳಗಲ್ಲ ಗುರುರಾಯ
ನರರೊಳಗಲ್ಲ ಸರ್ವಜ್ಞ

ಗುರುವೇ ನಿಮ್ಮನು ನೆನೆದು ಉರಿವ ಕಿಚ್ಚವ ಹೋಗಲು,ಉರಿತಗ್ಗಿ ಉದಕ ಕಂಡಂತೆ ನಿಮ್ಮಯ ಕರುಣವುಳ್ಳವರಿಗೆ ಸರ್ವಜ್ಞ

ಎತ್ತಾಗಿ ತೊತ್ತಾಗಿ,ಹಿತ್ತಲದ ಗಿಡನಾಗಿ
ಮತ್ತೆ ಪಾದದ ಕೆರವಾಗಿ ಗುರುವಿನ
ಹತ್ತಲಿರು ಎಂದ ಸರ್ವಜ್ಞ

ಹೀಗೆ “ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ” ಎಂಬ ಪುರಂದರ ದಾಸರ ವಾಣಿಯಂತೆ ಸರ್ವಜ್ಞ ಕೂಡ ಗುರುವಿನ ಮೇಲೆ ಅನನ್ಯವಾದ ಭಕ್ತಿ ವಿಶ್ವಾಸವಿಟ್ಟಲ್ಲಿ ದೊರೆ ಯುವ ಫಲಗಳು ಕುರಿತು ತನ್ನ ತ್ರಿಪದಿಗಳಲ್ಲಿ ತಿಳಿಸಿರುವನು.

ಮುಂದೆ ಗುರಿಯಿರಲಿ
ಹಿಂದೆ ಗುರುವಿರಲಿ
ಶಿಷ್ಯ ಕೋಟಿಯು ನಡುವೆ ಸಾಗಲಿ ನಿರಂತರ

ಮಕ್ಕಳ ಮುಕ್ತ ಮನಸ್ಸಿನ ಅನಂತ ಕನಸು-ಕಲ್ಪನೆ ಗಳಿಗೆ ಬಣ್ಣ ತುಂಬುವ,ಚಿತ್ತಾರ ಬಿಡಿಸುವ ವಿಶಿಷ್ಟ ಬದುಕು ಶಿಕ್ಷಕರದು ಪ್ರತಿ ವರ್ಷವೂ ಸಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಮಾಡುವ ಮೂಲಕ ಆದಿನ ಗುರುವಿನ ನಮನ ಜರುಗುತ್ತದೆ. ಜೊತೆಗೆ ಗುರು ಪೂರ್ಣಿಮೆಯನ್ನು “ವ್ಯಾಸ ಪೂರ್ಣಿಮೆ” ಎಂದು ಆಚರಿಸುವ ಮೂಲಕ ಋಷಿ ಮುನಿಗಳಿಗೆ ಗುರುಗಳಿಗೆ ನಮಿಸುತ್ತೇವೆ. ಇತರೇ ವೃತ್ತಿಗಳಿಗಿಂತ ಭಿನ್ನವಾದ ಮತ್ತು ವಿಭಿನ್ನ ವಾದ ವೃತ್ತಿ ಇದು. ಅಕ್ಷರ ಸಂಸ್ಕೃತಿಯ ವಾರಸು ದಾರಿಕೆಯ ಮಿಡಿತ ತುಂಬಿದ ತೃಪ್ತಿಯೊಂದಿಗೆ ಬೀಗುವ ದೇಶವನ್ನು ಕಟ್ಟಿಬೆಳೆಸುವ ಮಾನವ ಸಂಪನ್ಮೂಲವನ್ನು ನಿರ್ಮಿಸಿ ಕೊಡುವ ಹೊಣೆಗಾ ರಿಕೆ ಇಂದಿನ ಶಿಕ್ಷಕರ ಮೇಲಿದೆ. ಪ್ರಾಚೀನ ಕಾಲದ ಗುರುಕುಲ ಪದ್ದತಿ, ಬೌದ್ದ ಧರ್ಮದ ಸಂಘ ಮತ್ತು ವಿಹಾರಗಳು,ಇಸ್ಲಾಂ ಧರ್ಮದ ಮದರಸ ಹೀಗೆ ಸಾಗಿದ ನಮ್ಮ ಶಿಕ್ಷಣ ಈಗ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಮಕ್ಕಳಲ್ಲಿ ವೈಚಾರಿಕತೆಯ ಮೂಲಕ ಸಾಗುತ್ತಿರುವಾಗ ಇಂದಿನ ಶಿಕ್ಷಕರು ತಮ್ಮ ವೃತ್ತಿಯನ್ನು ನೂತನ ತಂತ್ರಜ್ಞಾನವನ್ನು ಅರಿತು ಬೋಧನೆಗೆ ತೊಡಗ ಬೇಕಾಗಿದೆ. ಇದರ ಜೊತೆಗೆ ನಮ್ಮ ಸಂಸ್ಕೃತಿಯ ನ್ನು ಕಲಿಸಬೇಕಾಗಿದೆ.

ಗುರು ನಾನಕ್

ಏನೇ ಆಗಲಿ ಎಲ್ಲಿಯವರೆಗೆ ಮಾನವೀಯ ಮೌಲ್ಯಗಳನ್ನು ನಾವು ಹೊಂದುವುದಿಲ್ಲವೋ ಅಂದಿನವರೆಗೂ ಕೊಲೆ,ಸುಲಿಗೆ,ಮೋಸ, ವೈಚಾರಿ ಕತೆಯ ಸಂಸ್ಕೃತಿಗಳ ಕೊರತೆ ಕಟ್ಟಿಟ್ಟ ಬುತ್ತಿ ಎಂಬುದು ದಿಟ. ಸರಕಾರ. ಕೂಡ ಹೊಸ ಶಿಕ್ಷಣ ನೀತಿ ಜಾರಿಯತ್ತ ಗಮನ ಹರಿಸಿದೆ. ಅದನ್ನು ಅಳ ವಡಿಸಿಕೊಂಡಲ್ಲಿ ಮಹತ್ವದ ಹೆಜ್ಜೆ ಇಲಾಖೆ ಇಡು ತ್ತದೆ. ಪ್ರತಿಭಾನ್ವಿತ ಶಿಕ್ಷಕರಿಗೆ ಇಲ್ಲಿ ಸಿಗಬೇಕಾದ ಸೌಲಭ್ಯಗಳು ದೊರೆಯುವ ಜೊತೆಗೆ ವಿದ್ಯಾರ್ಥಿ ಗಳಲ್ಲಿ ಕೂಡ ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ದುಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಣಿ ಯಾಗಲು ಅವಕಾಶಗಳನ್ನು ಒದಗಿಸಿಕೊಡುವಲ್ಲಿ ರಾಷ್ಟೀಯ ಶಿಕ್ಷಣ ನೀತಿ ಅನುಕೂಲವಾಗಲಿದೆ. ಈ ದಿಸೆಯಲ್ಲಿ ಮುಂಬರುವ ದಿನಗಳು ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಒದಗಿಸಿಕೊಡಲಿವೆ. ಈಗಾಗಲೇ ಶಿಕ್ಷಕ ಮಿತ್ರ ತಂತ್ರಜ್ಞಾನ ಆಧಾರಿತ ಆಪ್ ತಯಾರಿಸಿ ಅದರ ಮೂಲಕ ಅನೇಕ ಅನುಕೂಲತೆಗಳನ್ನು ಒದಗಿಸಿ ಕೊಡಲು ಇಲಾಖೆ ಸನ್ನದ್ದವಾಗಿದೆ. ಬದಲಾವಣೆ ಯೊಂದಿಗೆ ಬದುಕುವ ಅದನ್ನು ಜಾರಿಗೆ ತರುವಲ್ಲಿ ತಮ್ಮದೇ ಆದ ಪಾತ್ರವಹಿಸುವ ಶಿಕ್ಷಕರಿಗೆ ಅವರಿಗೆ ಕಲಿಸಿದ ಗುರುಗಳಿಗೆ ನಮನಗಳು.

✍️ಶ್ರೀ ವೈ.ಬಿ.ಕಡಕೋಳ
   ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
      ಮುನವಳ್ಳಿ-591117
    ತಾ:ಸವದತ್ತಿ ಜಿಲ್ಲೆ;ಬೆಳಗಾವಿ