ಕುಂಬಕ್ಕೆ ಅಕ್ಕಿ ಅಂಬೇರು ತುಂಬಲಿ
ಕಳಸಕ್ಕೆ ಅಕ್ಕಿ ಗರತೇರು ತುಂಬಲಿ
ಕುಂಬಾರರ ಮನೆಯಿಂದ ಕಂಬ ನೀರ ತರಲಿ
ಎಲ್ಲ ಗಂಡಿನೂ ಬಾಸಿಂಗ ಕಟ್ಟಲಿ
ಬಾಸಿಂಗ ಮ್ಯಾನೆ ಕೊಚ್ಚಳಾ ಕೂರಲಿ
ಕೊಚ್ಚಳಾ ಮ್ಯಾನೆ ನಾಗವ್ವ ಮಲಗಲಿ
ನಾಗವ್ವನ ಮ್ಯಾನೆ ಗಿಳಿರಾಮ ಇರಲಿ
-ಸುಕ್ರಿ ಬೊಮ್ಮಗೌಡ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ಹಾಲಕ್ಕಿ ಒಕ್ಕಲಿಗರ ಮೂಲ
ಹಾಲಕ್ಕಿ-ವೊಕ್ಕಲು ಕನ್ನಡ : ಹಾಲಕ್ಕಿ ಸಮುದಾಯ, ಹಲ್ವಕ್ಕಿ-ವಕ್ಕಲ್ ಮತ್ತು ಹಾಲಕ್ಕಿ- ಒಕ್ಕಲಿಗ ಎಂದೂ ಲಿಪ್ಯಂತರಿಸಲಾ ಗಿದೆ. ಭಾರತದ ಕರ್ನಾಟಕದ ಸ್ಥಳೀಯ ಬುಡಕಟ್ಟು. ಅವು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಧಾನವಾಗಿ ಕಂಡುಬರುತ್ತವೆ ಮತ್ತು ಒಕ್ಕಲಿಗರಿಂದ ಭಿನ್ನವಾಗಿವೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಾಸಿಸುವ ಹಾಲಕ್ಕಿ ಒಕ್ಕಲಿಗರನ್ನು “ಉತ್ತರ ಕನ್ನಡದ ಮೂಲನಿವಾಸಿಗಳು” ಎಂದು ಕರೆಯಲಾಗುತ್ತದೆ.ಹಾಲಕ್ಕಿ ಸಮುದಾಯವು ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ ಕುಮಟಾ, ಹೊನ್ನಾವರ ತಾಲ್ಲೂಕು ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಹಾಲಕ್ಕಿಯವರು ಅಚ್ಚಗನ್ನಡದ ವಿಭಿನ್ನ ಉಪ ಭಾಷೆಯನ್ನು ಮಾತನಾಡುತ್ತಾರೆ.
ಹಾಲಕ್ಕಿ ಒಕ್ಕಲಿಗ ಜನಾಂಗದ ಹುಟ್ಟಿನ ಬಗ್ಗೆ ಪೌರಾಣಿಕ ದಂತಕಥೆ
ಹಾಲಕ್ಕಿ ಹುಟ್ಟಿನ ಬಗ್ಗೆ ದಂತಕಥೆಯೊಂದು ಪ್ರಚಲಿತವಿದೆ. ಗದ್ದೆ ಉಳುತ್ತಿದ್ದ ಶಿವನಿಗೆ ಅನ್ನ ಹಾಲು ಒಯ್ಯುತ್ತಿದ್ದ ಪಾರ್ವತಿ ಎಡವಿ ಬಿದ್ದಾಗ, ಆ ಹಾಲು ಮತ್ತು ಅನ್ನ ಮಣ್ಣಿನಲ್ಲಿ ಕೂಡಿದವು. ಪಾರ್ವತಿ ಆ ಮಣ್ಣಿನಿಂದ ಎರಡು ಗೊಂಬೆ ತಯಾರಿಸಿದಳು. ಪಾರ್ವತಿಯನ್ನು ಹುಡುಕುತ್ತ ಬಂದ ಶಿವ ಆ ಗೊಂಬೆಗಳಿಗೆ ಜೀವ ಬರಿಸಿದ. ಹೀಗೆ ಇವರು ಹಾಲು+ ಅಕ್ಕಿ= ಮಿಶ್ರಣದಿಂದ ಹುಟ್ಟಿದವರಾದ್ದರಿಂದ ಹಾಲಕ್ಕಿ ಎಂಬ ಹೆಸರು ಬಂದಿತು.
ಮತ್ತೊಂದು ಕತೆಯ ಪ್ರಕಾರ ಕಡುಬಡವರಾದ ಇವರಿಗೆ ಭತ್ತ ಪೂರ್ತಿ ಬೆಳೆಯುವವರೆಗೆ ಕಾಯುವ ಆರ್ಥಿಕ ಸಾಮರ್ಥ್ಯ ಇಲ್ಲದೆ ಬತ್ತದ ತೆನೆ ಇನ್ನೂ ಹಾಲು ತುಂಬಿರುವಾಗಲೇ ಕೊಯ್ದು ಅರೆದು ಪಾಯಸ (ಹಾಲಕ್ಕಿ ಪಾಯಸ) ಮಾಡಿ ಉಣ್ಣುತ್ತಿದ್ದುದರಿಂದ ಇವರಿಗೆ ಹಾಲಕ್ಕಿಗಳು ಎಂಬ ಹೆಸರು ಬಂತೆಂದು ಹೇಳಲಾಗಿದೆ. ಇವರ ಮೈ ಹಾಲು ಅಕ್ಕಿಯ ಬಣ್ಣದ್ದಾಗಿರುವುದರಿಂದ ಇತರ ಒಕ್ಕಲು ಪಂಗಡದವರಿಂದ ಭಿನ್ನ ಎಂದು ಗುರುತಿಸಲು ಇವರಿಗೆ ಹಾಲಕ್ಕಿ ಒಕ್ಕಲು ಎಂಬ ಹೆಸರು ರೂಢಿಯಲ್ಲಿದೆ.
ಹಾಲಕ್ಕಿ ಒಕ್ಕಲಿಗರ ಜೀವನಕ್ರಮ

ಹಾಲಕ್ಕಿ ಒಕ್ಕಲಿಗರ ಜೀವನಕ್ರಮ ತುಸು ವಿಭಿನ್ನ. ಬತ್ತದ ಗದ್ದೆಗಳ ಹತ್ತಿರದಲ್ಲಿ ಗುಂಪು ಗುಂಪಾಗಿ ಇವರ ಗುಡಿಸಲುಗಳು. ಮಣ್ಣಿನ ಗೋಡೆಗೆ ಹುಲ್ಲು ಚಾವಣಿಯ ಎರಡು ಅಂಕಣ ಗಳ ಸಣ್ಣ ಮನೆ. ಆದರೆ ಮರೆಯಿಲ್ಲದ ಸ್ನಾನದ ಮನೆ ಇರುತ್ತದೆ. ಮನೆಯ ಮುಂದೆ ತುಳಸಿ ಹಾಗೂ ತೆಣಿಯ ಮೇಲೆ ಅಥವಾ ಅಂಗಳದಲ್ಲಿ ಬತ್ತ ಹಾಲಕ್ಕಿ ಇರದ ಭಿನ್ನಗೋತ್ರ ವಿವಾಹ ಪದ್ಧತಿ ಇವರಲ್ಲಿದೆ. ಹಾಲಕ್ಕಿ ಒಕ್ಕಲಿಗರು ಯಾವುದೇ ಸಂದರ್ಭದಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಯುವುದಿಲ್ಲ, ಊರ ಗೌಡನ ನೇತೃತ್ವದಲ್ಲಿ ಎಲ್ಲ ಮಂಗಲಕಾರ್ಯ ಗಳು ನಡೆಯುತ್ತವೆ. ಇವರು ಧರಿಸುವ ಉಡುಪು ಸರಳವಾಗಿರುತ್ತದೆ. ಮಾನವನ್ನು ಮುಚ್ಚಲು ಉಡಿದಾರಕ್ಕೊಂದು ಕಚ್ಚೆ, ಹೆಗಲಿಗೊಂದು ಕಂಬಳಿ, ತಲೆಗೊಂದು ರುಮಾಲು. ಕವಳಿಗೆ ಸಂಚಿ, ಕೆಲಸದ ಕತ್ತಿ ಸದಾ ಇವರ ಜೊತೆಗಿರುತ್ತವೆ. ಹೆಂಗಸರು ಮಗ್ಗದ ಚೌಕುಳಿ ಸೀರೆಯನ್ನು ಮೊಣಕಾಲಿನವರೆಗೆ ನೆರಿಗೆ ಮಾಡಿ ಇಳಿಬಿಟ್ಟು ಎಡಬಾಜುಗೆ ಸೆರಗನ್ನು ತಂದು ಗಂಟು ಕಟ್ಟಿ ಉಡುವರು. ಕುಪ್ಪಸವಿಲ್ಲದ ಭುಜಗಳ ತುಂಬ ಕರಿಮಣಿ ಸರಗಳನ್ನು ಧರಿಸಿರು ತ್ತಾರೆ. ಅಕ್ಕಿ, ರಾಗಿ, ಮೀನು ಮುಖ್ಯ ಆಹಾರ. ರಾಗಿ ಅಂಬಲಿ ಕೂಡ ಹಾಲಕ್ಕಿಗಳ ಆಹಾರ ಪದ್ಧತಿಯಲ್ಲಿ ಬಳಸುತ್ತಾರೆ.

ಹಾಲಕ್ಕಿಗಳು ಕೃಷಿಯನ್ನು ಜೀವನಾಧಾರವಾಗಿ ರಿಸಿಕೊಂಡಿರುತ್ತಾರೆ. ಇವರು ಆದಿವಾಸಿ ಜೀವನ ಪದ್ಧತಿಯನ್ನು ಅನುಸರಿಸುತ್ತಾರೆ. ಜೀವನ ವಿಧಾನ ಇನ್ನೂ ಪ್ರಾಚೀನವಾಗಿದೆ. ಮಹಿಳೆಯರು ಕರಿಮಣಿಗಳು ಮತ್ತು ನೆಕ್ಲೇಸ್ಗಳು, ಭಾರವಾದ ಮೂಗಿನ ಉಂಗುರ ಗಳು ಮತ್ತು ವಿಶಿಷ್ಟವಾದ ಉಡುಪಿನಿಂದ ತಮ್ಮನ್ನು ಅಲಂಕರಿಸುತ್ತಾರೆ. ಹಾಲಕ್ಕಿ ಒಕ್ಕಲಿಗರು ಗಿಡಮೂಲಿಕೆ ಗಳಿಂದ ಔಷಧ ತಯಾರಿಸುವುದರಲ್ಲಿ ಪ್ರಸಿದ್ಧರು. ದನಕರುಗಳ ಹಾಗೂ ಮನುಷ್ಯರ ರೋಗಗಳಿಗೆ ಔಷಧ ಕೊಡುವ ಪ್ರಸಿದ್ಧ ವೈದ್ಯ ಮನೆತನಗಳಿವೆ. ಇದು ವಂಶಪಾರಂಪರ್ಯವಾಗಿ ನಡೆದು ಬಂದ ವೃತ್ತಿ. ಇವರು ಆರ್ಥಿಕವಾಗಿ ಹಿಂದುಳಿದವರು. ಹೆಂಗಸರು ಒಕ್ಕಲುತನದಲ್ಲಿ ನೆರವಾಗುವುದ- ಲ್ಲದೆ ದೂರದ ಬೆಟ್ಟ ಕಾಡಿನಿಂದ ಕಟ್ಟಿಗೆ ಹೊತ್ತು ತಂದು ಮಾರುವರು. ಮಗ್ಗದ ಚೌಕಳಿ ಸೀರೆ, ಮೊಣ ಕಾಲಿನವರೆಗೆ ನೆರಿಗೆ ಮಾಡಿ ಇಳಿಬಿಟ್ಟು, ಎಡಗಡೆ ಸೆರಗು ಕಟ್ಟುವ ಇವರು, ಕತ್ತಿನ ತುಂಬ ಆಕರ್ಷಕವಾಗಿ ಮಣಿಸರಗಳನ್ನು ಪೇರಿಸಿ- ಕೊಂಡಿರುವ ಹೆಂಗಸರು ಒಕ್ಕಲುತನದಲ್ಲಿ ನೆರವಾಗುತ್ತಾರೆ. ಇವರದು ಕೃಷಿ ಅವಲಂಬಿತ ಜೀವನ. ಕೆಲವು ಮನೆತನಗಳು ವಂಶಪಾರಂಪ ರ್ಯವಾಗಿ ಮನುಷ್ಯರಿಗೂ, ದನಕರುಗಳಿಗೂ ವನಸ್ಪತಿಗಳ ಔಷಧ ಕೊಡುವುದರಲ್ಲಿ ಸಿದ್ಧ ಹಸ್ತರು.

ಹಾಲಕ್ಕಿಗ ಒಕ್ಕಲಿಗರ ಹಟ್ಟಿಗಳಲ್ಲಿರುವ ಪದ್ದತಿಗಳು

ಪ್ರತಿ ಕೊಪ್ಪ ಒಂದು ಹಳ್ಳಿ. ಅಲ್ಲಿ ಊರ ಗೌಡ, ಬುದವಂತ, ಕೋಲಕಾರ ಎಂಬ ಅಧಿಕಾರಿಗಳು ಇರುತ್ತಾರೆ. ಕೊಪ್ಪಕ್ಕೆ ಸಂಬಂಧಪಟ್ಟ ವಿಷಯಗ ಳನ್ನು ಕೂಟದಲ್ಲಿ ಚರ್ಚಿಸುತ್ತಾರೆ.ಕೂಟ ಅಂದರೆ ಸಭೆ. ಕೊಪ್ಪದ ಎಲ್ಲ ವಯಸ್ಕರ ಗಂಡಸರೂ ಕೂಟದ ಸದಸ್ಯರು. ಊರ ಅಧಿಕಾರಿಗಳ ಪಟ್ಟ ವಂಶಪಾರಂಪರ್ಯವಾದದ್ದು. ಅನೇಕ ಕೊಪ್ಪ ಗಳು ಸೇರಿ ಒಂದು ಸೀಮೆಯಾಗುತ್ತದೆ. ಹಾಲಕ್ಕಿ ಒಕ್ಕಲಿಗರ ಇಂಥ ಏಳು ಸೀಮೆಗಳಿವೆ. ಸೀಮೆಯ ಸಭೆಗೆ ಸೀಮಾಕೂಟ ಎಂದು ಹೆಸರು. ಸಮಾಜದ ನಿಯಮಗಳನ್ನು ಉಲ್ಲಂಘಿಸಿದವ ರಿಗೆ ಸೀಮೆಯ ಕೂಟ ಬಹಿಷ್ಕಾರ ಹಾಕುವುದು. ಬಹಿಷ್ಕಾರಕ್ಕೆ ಜಾತಿ ಕಟ್ಟು ಎಂಬ ಹೆಸರಿದೆ. ಹಾಲಕ್ಕಿ ಮಹಿಳೆಯ ಚೊಚ್ಚಲ ಹೆರಿಗೆ ಗಂಡನ ಮನೆಯಲ್ಲಿಯೇ ಆಗಬೇಕು. ನಾಮಕರಣದ ದಿನ ತವರಿನ ಕೊಪ್ಪದವರೆಲ್ಲ ಬಂದು ತಿಂಡಿ ಗಳನ್ನು ಹಂಚುತ್ತಾರೆ. ಇದಕ್ಕೆ ನೆಂಟರ ಆಮೆ ಎಂದು ಹೆಸರು.ಇವರಿಗೆ ಮದುವೆ ಪವಿತ್ರವಾದ ಸಂಸ್ಥೆ. ಮೊದಲು ಬಾಲ್ಯ ವಿವಾಹ ರೂಢಿಯ ಲ್ಲಿತ್ತು. ಅಕಸ್ಮಾತ್ತಾಗಿ ಮದುವೆಯ ಮೊದಲೇ ಹುಡುಗಿ ಮೈನೆರದರೆ ಅವಳನ್ನು ಮನೆಯವರೇ ಕಾಡಿಗೆ ಒಯ್ದು ಕಣ್ಣುಕಟ್ಟಿ ಬಿಟ್ಟುಬರುತ್ತಿದ್ದರಂತೆ. ಈಗ ಈ ಶಿಕ್ಷೆಯಿಲ್ಲ. ಹೆಣ್ಣಿಗೆ ಹೆಣ್ಣು ಇವರಲ್ಲಿ ಈಗಲೂ ಪ್ರಚಲಿತವಿರುವ ಪದ್ಧತಿ. ಹೆಣ್ಣಿಗೆ ಮದುವೆಯಲ್ಲಿ ಸ್ವಾತಂತ್ರ್ಯವಿಲ್ಲ. ಹಿರಿಯರೇ ಮದುವೆ ನಿಶ್ಚಯಿಸುತ್ತಾರೆ. ಸಾಮಾನ್ಯವಾಗಿ ಆದ್ರಾ ನಕ್ಷತ್ರದಲ್ಲಿ ಮದುವೆ ನಡೆಯುತ್ತದೆ. ಊರಿನಲ್ಲಿ ಒಂದೇ ದಿನ ಹತ್ತು ಹನ್ನೆರಡು ಮದುವೆಗಳು ನಡೆಯುವುದುಂಟು. ಹೆಸ್ರೂಟ, ಮತ್ತು ಮದುಮಗಳನ್ನು ಅಡಗಿಸಿಡುವ ಪದ್ಧತಿ ಗಳು ಇವರಲ್ಲಿರುವ ಕ್ರಮ. ಊರಿನವರೆಲ್ಲಾ ಹೋಗಿ ಬೇಟೆಯಾಡುವುದು ಇವರದೊಂದು ಹವ್ಯಾಸ. ಇವರ ಬೇಟೆಯಲ್ಲಿ ಬಂದೂಕನ್ನು ಬಳಸುವುದಿಲ್ಲ ಬದಲಾಗಿ ಈಟಿಯನ್ನು ಬಳಸು ತ್ತಾರೆ.ಬಲೆಕಟ್ಟಿ ಬೇಟೆಯಾಡು ತ್ತಾರೆ. ಈ ಬೇಟೆಗೆ ಹೊಲ ಎಬ್ಬಿಸುವುದು ಎನ್ನುತ್ತಾರೆ. ಸಸಿಗಳನ್ನು ಬೆಳೆಸುವಲ್ಲಿ ಕಾಳಜಿ, ಖಾದ್ಯವಾಗಿ ಬಳಸಲ್ಪಡುವ ಕಳೆಗಿಡಗಳು, ಗಿಡಮೂಲಿಕೆಗಳು, ಗಿಡಮರಬಳ್ಳಿ ಬೀಜಗಳ ಕುರಿತು ಅಗಾಧ ಜ್ಞಾನ ಇವರದು.
ಹಾಲಕ್ಕಿ ಒಕ್ಕಲಿಗರು ಆಚರಿಸಿಕೊಂಡು ವಿಶೇಷ ಆಚರಣೆಗಳು

ಕರಿ ಹಬ್ಬವನ್ನು ಸುಗ್ಗಿ ಹಬ್ಬ ಎನ್ನುವರು. ತುಳಸಿ ಹಬ್ಬ, ಗೋವಿನ ಹಬ್ಬ, ಹಾವಿನ ಹಬ್ಬ, ಗಡಿ ಹಬ್ಬ ಗಳನ್ನು ಆಚರಿಸುವರು. ದನಗಳ ಹಬ್ಬದಲ್ಲಿ ದನಗಳನ್ನು ಬಣ್ಣಬಣ್ಣದ ಕಾಗದದ ಹಾಗೂ ನಾರಿನ ಚವಲಗಳಿಂದ ಶೃಂಗರಿಸಿ ಪೂಜಿಸುವರು. ಕರ್ನಾಟಕದ ಜನಪದ ನೃತ್ಯ ಕಲೆಯ ಒಂದು ಪ್ರಕಾರವಾದ ಸುಗ್ಗಿಕುಣಿತ, ಇವರ ವಿಶಿಷ್ಟ ಕಲಾ ಪ್ರಕಾರವಾಗಿದೆ. ಬೆಂಡು, ಬೇಗಡೆಗಳಿಂದ ಅಲಂಕರಿಸಿದ ತುರಾಯಿಧರಿಸಿ ಗುಮಟೆ ವಾದ್ಯ ದ ಜೊತೆಗೆ ಕುಣಿಯುವ ಇವರಲ್ಲಿ ಅಲಾವಿ ಕುಣಿತ, ಕೋಲುಕುಣಿತ, ಕುಂಚ ಕುಣಿತ, ಅಡ್ಡ ಕುಣಿತ ಹೀಗೆ ವಿವಿಧ ಕುಣಿತಗಳಿವೆ.ದೇವರು ದೆವ್ವಗಳಲ್ಲಿ ಇವರಿಗೆ ನಂಬಿಕೆ. ಇವರು ತಿರುಪತಿ ತಿಮ್ಮಪ್ಪನ ಭಕ್ತರು. ಆಲ, ಅಶ್ವತ್ಥ ವೃಕ್ಷಗಳನ್ನು ಪೂಜಿಸುವರು. ಮೃತರ ಆತ್ಮ ದೈವಗಳಾಗುತ್ತ ವೆಂಬುದು ಇವರ ನಂಬಿಕೆ. ಹೆಣ್ಣುಗೊರೆ, ಗಂಡು ಗೊರೆ ಇವು ಸಹಾಯ ದೈವಗಳು. ನೂಡಿದೈವ ವಮ್ಮಲ್ತಿ ಹೆಣ್ಣುದೆವ್ವಗಳಲ್ಲಿ ನಂಬಿಕೆಯನ್ನು ಇಟ್ಟು ಕೊಂಡಿರುತ್ತಾರೆ. ಇವರು ಹೆಣವನ್ನು ಸುಡುತ್ತಾರೆ. ಮಕ್ಕಳ ಸೊಡ್ಲೆ ಇದು ಮಕ್ಕಳ ಸ್ಮಶಾನ ಪ್ರತ್ಯೇಕ ವಾಗಿ ಇದೆಯಂತೆ. ಸತ್ತ ಮೈಲಿಗೆಯನ್ನು ಊರ ಗೌಡನೇ ನೀರು ಚಿಮುಕಿಸಿ ಶುದ್ಧಿ ಮಾಡುವನು. ತಿರುಪತಿ ಯಾತ್ರೆ ಮಾಡಿ ಬಂದವರಿಗೆ ದಾಸರು ಎಂದು ಕರೆಯುತ್ತಾರೆ. ಅವರು ಸತ್ತಾಗ ಕೊರಳಿಗೆ ತುಳಸಿ ಹಾಕಿ ಆಗೇರ ವಾದ್ಯದೊಡನೆ ಸ್ಮಶಾನಕ್ಕೆ ಒಯ್ಯುತ್ತಾರೆ.
ಹಾಲಕ್ಕಿ ಒಕ್ಕಲಿಗರು ಜಾನಪದ ಕಲೆಯ ಪ್ರವರ್ತಕರು

ಹಗರಣ, ಗುಮಟೆ ಪಾಂಗು, ಕೋಲಾಟ, ಸುಗ್ಗಿ ಕುಣಿತ ಇವು ಹಾಲಕ್ಕಿ ಒಕ್ಕಲಿಗರ ಮನೋ ರಂಜನೆಗಳು.ಕರ್ನಾಟಕದಲ್ಲಿ ಹಾಲಕ್ಕಿ ಒಕ್ಕಲಿ ಗರ ಸುಗ್ಗಿ ವಿಶಿಷ್ಟವಾದ್ದು. ಬಣ್ಣದ ಉಡುಪು ತೊಟ್ಟು, ಬಣ್ಣದ ಕಾಗದ, ಬೆಂಡು ಬೇಗಡೆ ಗಳಿಂದ ಶೃಂಗರಿಸಿ ತಯಾರಿಸಿದ ತುರಾಯಿ ಯನ್ನು ತಲೆಯಲ್ಲಿ ಧರಸಿ ಕುಣಿಯುವ ಸೊಗಸು ಆಕರ್ಷಕ ವಾದುದು. ಸುಗ್ಗಿಯಲ್ಲಿ ಕಿರೇಸುಗ್ಗಿ ಮತ್ತು ಹಿರೇಸುಗ್ಗಿ ಎಂದು ಎರಡು ವಿಧಗಳು. ವೇಷ- ಭೂಷಣ, ಹೆಜ್ಜೆಗಾರಿಕೆಗಳಲ್ಲಿ ಇವು ವ್ಯತ್ಯಾಸ ಪಡೆದಿವೆ. ಇವು ಪ್ರತಿ ವರ್ಷ ಪರ್ಯಾ ಯವಾಗುವುದು ಒಂದು ಪದ್ದತಿ. ಸುಗ್ಗಿ ಕುಣಿತಕ್ಕೆ ಗುಮಟೆ ವಾದ್ಯ ವನ್ನು ಬಳಸುತ್ತಾರೆ. ಅಡ್ಡ ಕುಣಿತ, ಕೋಲು ಕುಣಿತ, ಕುಂಚ ಕುಣಿತ, ಅಲಾವಿ ಕುಣಿತ – ಹೀಗೆ ವಿವಿಧ ಬಗೆಯ ಕುಣಿತ ಗಳಿವೆ. ಸುಗ್ಗಿ ಕುಣಿತ ಕರ್ನಾಟಕ ಜನಪದ ನೃತ್ಯ ಕಲೆಗಳಲ್ಲಿ ಒಂದು.

ಹಾಲಕ್ಕಿ ಜನಾಂಗದ ಸುಪ್ರಸಿದ್ಧ ಮಹಿಳೆ “ಸುಕ್ರಿ ಬೊಮ್ಮಗೌಡ” ಅವರು ಪ್ರಸಿದ್ಧ ಹಾಲಕ್ಕಿ ಒಕ್ಕಲಿಗ ಮತ್ತು ಜಾನಪದ ಗಾಯನಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರನ್ನು “ಹಾಲಕ್ಕಿಗಳ ನೈಟಿಂಗೇಲ್” ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.

ಇನ್ನೋರ್ವ ಮಹಿಳೆ ಸಸ್ಯಗಳನ್ನು ತನ್ನ ಮಕ್ಕಳಂತೆ ಪ್ರೀತಿಸಿ, ಅವುಗಳ ಸಂರಕ್ಷಣೆ ಯಲ್ಲಿ ಹಾಗೂ ಬೀಜಗಳನ್ನು ಸಸಿ ಮಾಡಿ ಅರಣ್ಯದಲ್ಲಿ ನೆಡುವ ಕಾರ್ಯದಲ್ಲಿ ಜನ ಮಣ್ಣನೆ ಗಳಿಸಿದವರು ತುಳಸಿ ಗೌಡರು. ಸಣ್ಣ ಕಚ್ಚೆ ಪಂಚೆಯೇ ಪುರುಷರ ದಿನ ನಿತ್ಯದ ಉಡುಪು. ಹೊರಗೆ ಹೋಗುವಾಗ ಮಾತ್ರ ಮೇಲುಡುಗೆ, ತಲೆಗೆ ಸಣ್ಣ ರುಮಾಲು, ಹೆಗಲಿಗೆ ಕಂಬಳಿ ಅಥವಾ ಟವೆಲ್ ಧರಿಸುತ್ತಾರೆ. ಕವಳಿಗೆ ಸಂಚಿ ಸಣ್ಣ ತಂಬಾಕು ಇಡುವ ಚೀಲ, ಕತ್ತಿ ಸದಾ ಇವರ ಬಳಿ ಇರುತ್ತದೆ. ಅಂಕೋಲಾ ತಾಲೂಕಿನ ಪರಿಸರ ವಾದಿಯಾಗಿದ್ದು, ಇವರಿಗೆ 2020 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾ ರೆಂಬುವುದೆ ಹೆಮ್ಮೆಯ ಸಂಗತಿ.
ಬೆಳಂಬರದ ವೈದ್ಯರಾದ ಡಾ.ಹನುಮನಾಥ ಬೊಮ್ಮುಗೌಡ ರವರು ಹಾಲಕ್ಕಿ ಒಕ್ಕಲಿಗರಾಗಿದ್ದಾರೆ ಮತ್ತು ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಜ್ಞಾನ ವಿಭಾಗದ ಸದಸ್ಯರು, ಪಶ್ಚಿಮ ಘಟ್ಟಗಳ ಅರಣ್ಯ ಉತ್ಪನ್ನಗಳ ಸದಸ್ಯರು, ಜೆಸಿ ಕ್ಲಬ್ ನ ಸದಸ್ಯರು ಮತ್ತು ಇನ್ನೂ ಕೆಲವು ಗೌರವಾನ್ವಿತ ಹುದ್ದೆಗಳನ್ನು ಹೊಂದಿದ್ದಾರೆ. ವೈದ್ಯಕೀಯ ಕ್ಷೇತ್ರ ಸಮಾಜ ಸೇವೆಯಲ್ಲಿನ ಅವರ ವಿನಮ್ರ ಸೇವೆಯನ್ನು ಗಮನಿಸಿ ಅವರಿಗೆ 2005 ರಲ್ಲಿ ನವದೆಹಲಿ ಯಲ್ಲಿ ಫೆಲೋಶಿಪ್, 2005ರಲ್ಲಿ ವೈದ್ಯರತ್ನ ಪ್ರಶಸ್ತಿ, 2014 ರಲ್ಲಿ ಕರ್ನಾಟಕದ ಅತ್ಯಂತ ಗೌರವಾನ್ವಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿದೆ.
ಹಾಲಕ್ಕಿ ಒಕ್ಕಲಿಗರಲ್ಲಿರುವ ಪಂಗಡಗಳು
ಇವರಲ್ಲಿ ಎಂಟು ಮೂಲ ಪಂಗಡಗಳನ್ನು ಗುರುತಿಸಲಾಗಿದೆ. ಪಂಗಡಗಳನ್ನು ಬಳಿ ಎಂದು ಕರೆಯುತ್ತಾರೆ. ಬಳಿಗಳಿಗೆ ಗಿಡ, ಬಳ್ಳಿಗಳ ಮತ್ತು ಪ್ರಾಣಿಗಳ ಹೆಸರು ಸಂಕೇತ ವಿದೆ.ಗುರಾಣಿ ಬಳಿ, ಖಡಿನ ಬಳಿ, ಕೇದಿಗೆ ಬಳಿ, ಮಂಜಲಿ ಬಳಿ, ಸುಸ್ಕಿನ ಬಳಿ, ದ್ಯಾವನ ಬಳಿ, ಕುಂತಿ ಬಳಿ ಹೀಗೆ ಎಂಟು ಪ್ರಕಾರಗಳು ಇವೆ. ಮಾಂಸಾಹಾರಿ ಗಳಾದರೂ ಇವರು ತಮ್ಮ ಬಳಿಯ ಹೆಸರಿನ ಪ್ರಾಣಿಗಳನ್ನು ತಿನ್ನುವುದಿಲ್ಲ, ಕೊಲ್ಲುವುದೂ ನಿಷಿದ್ಧ. ಹಾಲಕ್ಕಿಗಳನ್ನು ಪ್ರಸ್ತುತ ಇತರೆ ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ. ಪರಿಶಿಷ್ಟ ಪಂಗಡ ಎಂದು ಗುರುತಿಸಲು ಬುಡಕಟ್ಟು ಜನಾಂಗದ ಬೇಡಿಕೆಗಳ ಬಗ್ಗೆ ಹಾಲಕ್ಕಿ ಗಳನ್ನು ಅರಿತು ಸಮಾಜ ಕಲ್ಯಾಣ ಇಲಾಖೆ ಯಿಂದ ಅಧ್ಯಯನವನ್ನು ನಿಯೋಜಿಸಲಾಯಿತು ಮತ್ತು ವರದಿಯನ್ನು ಸಲ್ಲಿಸಲಾಗಿದೆ.

ಒಟ್ಟಾರೆಯಾಗಿ ಕೃಷಿಯನ್ನು ಅವಲಂಬಿಸಿ ಬಾಳಿ ಬದುಕಿದ ಕರ್ಮಭೂಮಿ ಹಾಗೂ ಪಾರಂಪರಿಕ ಆಚರಣೆಗಳು, ನಿಸರ್ಗಕ್ಕೆ ತೀರಾ ಹತ್ತಿರವಿರುವ ಜೀವನ ಪದ್ಧತಿಗಳು, ಜಾಗತೀಕರಣದ ಭರದಲ್ಲಿ ಕುಸಿಯುತ್ತಿವೆ. ಭಾಷೆ, ಆಹಾರ, ವೇಷ ಭೂಷಣ, ಹಾಡು-ನೃತ್ಯ ಎಲ್ಲವುಗಳ ಮೇಲೆ ಆಧುನಿಕತೆ ಪರಿಣಾಮ ಬೀರುತ್ತಿದೆ. ಹಾಲಕ್ಕಿ ಗೌಡರು/ಒಕ್ಕಲಿ ಗರು ಸಂಭ್ರಮದಿಂದ ಸಮಾಜಮುಖಿಯಾಗಿ ಬೆಳೆಯುತ್ತಿದ್ದಾರೆ, ಆದರೆ ಆಧುನಿಕತೆಯ ಅಬ್ಬರ ದಲ್ಲೂ ಇಷ್ಟು ವರ್ಷಗಳವರೆಗೆ ಕಾಪಿಡಲಾದ ವಿಶಿಷ್ಟವಾದ ಸಂಸ್ಕೃತಿಯೊಂದು ಇದೀಗ ಕಣ್ಮರೆ ಯಾಗುತ್ತಿರುವ ಭೀತಿ ಎದುರಾಗಿದೆ.
ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ
Lekhana thumba chennagide.
LikeLike
Sakashtu mahitiyondige…uttamavagi moodibandide.. super
LikeLike
Very informative article..
Nam uttarkannada zille yali sumaru pangada galive.. avar culture avar nade nudi bashe yallavanu navu gouravisabeku..
LikeLike
ಒಳ್ಳೆಯ ಲೇಖನ . ಅಭಿನಂದನೆ.
ಹೊಲಿ ಶೇಖರ ಸಾಹಿತಿಗಳು ಬೆಂಗಳೂರು
LikeLike
ಹಾಲಕ್ಕಿ ಒಕ್ಕಲಿಗರ ಬಗ್ಗೆ ಬರೆದ ಲೇಖನ ತುಂಬಾ ಸೊಗಸಾಗಿದೆ.
LikeLike
ಉತ್ತಮ ಲೇಖನ ಮೇಡಂ
LikeLike
Superb article 👏
LikeLike
👌👌👌👌👌👌
LikeLike
ಹಾಲಕ್ಕಿ ಗೌಡರ ಕುರಿತಾದ ಅಧ್ಯಯನಪೂರ್ಣ ಲೇಖನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕುಮಟಾ ಗೋಕರ್ಣಗಳ ಮೂಲ ನಿವಾಸಿಗಳಾದ ಹಾಲಕ್ಕಿ ಒಕ್ಕಲಿಗರು ಹಾಲಿನಂಥ ಮನಸ್ಸಿನವರು . ಇವರೊಡನೆಯ ನನ್ನ ಒಡನಾಟ ಇಂದು ನಿನ್ನೆಯದಲ್ಲ. ಈ ಜನರ ಸ್ನೇಹದ ಹಾಲ್ಜೇನು ಉಂಡವ ನಾನು. ಶಿವಲೀಲಾ ಅವರ ಪ್ರಸ್ತುತ ಲೇಖನ ಓದಿ ಜನರ ನೆನಪಿನಿಂದ ಮನಸ್ಸು ಆರ್ದ್ರಗೊಂಡಿತು. ಸಾಮಾಜಿಕ ಸ್ಥಿತ್ಯಂತರದಲ್ಲಿ ಹಾಲಕ್ಕಿ ಒಕ್ಕಲಿಗರ ಬದುಕು ಆಧುನಿಕತೆಯ ಶಿಷ್ಟಾಚಾರಕ್ಕೊಳಗಾಗಿದೆ. ಆದರೆ ಅದೇ ಮುಗ್ಧತೆ… ಪ್ರಾಮಾಣಿಕತೆ ಹಾಲಿನಂಥ ಮನಸ್ಸಿನಲ್ಲಿ ಯಾವ ಬದಲಾವಣೆಯೂ ಇಲ್ಲ! ಇಂಥ ಒಂದು ಜನಜೀವನ ಲೇಖನ ಅಧ್ಯಯನ ಪೂರ್ಣವಾಗಿ ಬರೆದಿದ್ದಾರೆ ಲೇಖಕಿ ಶಿವಲೀಲಾ ಹುಣಸಗಿ ಅವರು.
ವೃತ್ತಿಯಲ್ಲಿ ಶಾಲಾ ಶಿಕ್ಷಕಿ.. ಉತ್ತಮ ಭಾಷಣಗಾರ್ತಿ. ಶಾಲಾ ಕಾಲೇಜು ದಿನಗಳಲ್ಲಿ ತಮ್ಮ ವಾಗ್ಮಿತ್ವದಿಂದ ಸಂಚಲನವುಂಟು ಮಾಡಿದ ಪ್ರತಿಭಾವಂತೆ. ಶ್ರೇಯಾಂಕ ವಿಜೇತೆ. ಪ್ರಶಸ್ತಿ ಪುರಸ್ಕಾರಗಳ ಕಿರೀಟಧಾರಿ. ಕವನ..ಸಂಕಲನ..ಲೇಖನಗಳನ್ನು ಬರೆದು ಸಾರಸ್ವತ ಲೋಕದ ಗಮನ ಸೆಳೆದವರು.
ಡಿ.ಎಸ್ ನಾಯ್ಕ ಸಿರಸಿ
LikeLike
ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಹೊಸ ವಿಷಯದ ಅನಾವರಣ ಮಾಡಿಕೊಟ್ಟಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ❤️🥰
LikeLike