ಹೃದಯದ ಹಣತೆಯಲ್ಲಿ
ಭಾವದೀಪ ಬೆಳಗಲಿ

ಬದುಕಿನ ಬಾಂದಳದಲ್ಲಿ
ಜ್ಞಾನಜ್ಯೋತಿ ಬೆಳಗಲಿ

ಧ್ಯೇಯದ ದೀವಿಗೆಯಲ್ಲಿ
ಜಯದೀಪ ಬೆಳಗಲಿ

ಪರರನ್ನು ಕಾಣುವಲ್ಲಿ
ಪ್ರೀತಿಯ ನಂದಾದೀಪ ಬೆಳಗಲಿ

ಮನೆ-ಮನದ ಆಲಯದಿ
ಭಾರತವು ಬೆಳಗಲಿ

ಜಗದ ಜಂಗುಳಿಯಲ್ಲಿ
ಐಕ್ಯತೆಯ ದೀಪ ಬೆಳಗಲಿ

ಆಲೋಚನೆಯ ಆವರ್ತದಲ್ಲಿ
ನನ್ನೊಳಗೆ ನೀ ದೀಪವಾಗು ಗುರುವೇ

ಸಿಹಿಮೊಗೆ
(ವಿದೂಷಿ ನಂದಿನಿ ನಾರಾಯಣ್)
ಫ್ರ್ಯಾಂಕ್ ಫರ್ಟ್, ಜರ್ಮನಿ