ಎದೆಯಾಳದೊಳು ಎದುರಿಸಲಾಗದ ಅವ್ಯಕ್ತ
ತಮಂದವು ಬಟ್ಟಬಯಲಾಗಲಿ ಬೆಳಕಾಗಲಿ
ಬೆಳಗಲಿ ಸಂಜ್ಯೋತಿಯು ಮತ್ತೆ ಪ್ರೀತಿಯು
ಬಾ ಬೆಳಕೆ ಬೆಳಗಿಸೆಮ್ಮಯ ಮನದ ಮನೆಯ
ವಿಕಾರತೆಯ ಇಲ್ಲವಾಗಿಸಿ ಸಹಜತೆ ಆಲಂಗಿಸಿ
ಸ್ನೇಹ ಪ್ರೀತಿ ಸೌಹಾರ್ದತೆಯ ಸಾಕಾರವಾಗಿಸಿ
ನಗುವಿನ ದೀಪವು ದಿವ್ಯವಾಗಲಿ ಭವ್ಯವಾಗಲಿ
ಬೆಳಕಿಲ್ಲದ ನರಕಯಾತನೆ ಬೇಗ ಮುಗಿಯಲಿ
ತಾಮಸತತೆಯ ಬಲಿಕೊಟ್ಟು ಒಲವು ಹಂಚಲಿ
ಭೂರಮೆ ಬರಡಾಗದಿರಲಿ ಎಲ್ಲೆಡೆ ಹಸಿರಾಗಲಿ ಕಾಂಚಾಣದ ಝಣಝಣ ಕೇಕೆ ಹಾಕದಿರಲಿ ಹಬ್ಬದ ಪಟಾಕಿ ಜಗದಲಿ ಜೀವ ಹಿಂಡದಿರಲಿ ಎಣ್ಣೆ ಬತ್ತಿಯಿರಲಿ ಅಲ್ಲಿ ಪ್ರೀತಿಯ ದೇವನಿರಲಿ ದ್ವೇಷವಿಲ್ಲದೇ ಕೋರ್ಟು ಕಛೇರಿ ಕದಮುಚ್ಚಲಿ ದೀಪ ಹಚ್ಚಿ ಬತ್ತಿಗಲ್ಲ ಜಿಡ್ಡುಮತಿಯ ಮನದಲಿ ದೀಪದಿಂದ ದೀಪಬೆಳಗಿ ಪ್ರೀತಿ ಪ್ರಜ್ವಲಿಸಲಿ

✍️ಶಿವಾನಂದ ನಾಗೂರ ಧಾರವಾಡ.