ಇಂದು ಬಂದಿದೆ ಶ್ರಾವಣ ಹುಣ್ಣಿಮೆ ದಿನ
ಸೋದರ ಬಾಂಧವ್ಯದ ಸಾಂಕೇತಿಕ ದಿನ
ಸೋದರಿ ಕಟ್ಟುವಳಿಂದು ಕೈಗೆ ರಕ್ಷಾಬಂಧನ
ಸೋದರನಿಗೆ ಅವಳ ಸುರಕ್ಷತೆಯಹೊಣೆತನ.
ಒಂದೇ ಬಳ್ಳಿಯ ಹೂಗಳೆಂಬ ಈ ಸಂಬಂಧ
ಒಂದೇ ನಂಟಿನೆಳೆಯಲಿ ಸುತ್ತಲ್ಪಟ್ಟ ಬಂಧ
ಅಕ್ಕ ತಮ್ಮ ಅಣ್ಣ ತಂಗಿಯರ ಈ ಮಧುರ ಭಾವ
ಹೊಗಳಲು ಮಾತಿಲ್ಲˌವರ್ಣಿಸಲು ಪದಗಳೇ ಇಲ್ಲ.
ಇಂದಿನ ಯಾಂತ್ರಿಕ ಯುಗದಲ್ಲೀಗ ಇನ್ನೂ ಹೆಚ್ಚು ಪ್ರಸ್ತುತ
ಕ್ಷೀಣಿಸುತಿರುವ ಮೌಲ್ಯಗಳನು ಮಾಡಬೇಕಿದೆ ಬಲಯುತ
ಬಂಧಿಸಬೇಕಿದೆ ಪ್ರತಿಯೊಬ್ಬರನೂ ಮಾನವತೆಯ ರಾಖಿ
ಪ್ರೀತಿವಿಶ್ವಾಸದ ಸೂತ್ರದಿಂದ ಮಾತ್ರವೇ ಮನುಜ ಸುಖಿ.
ರಕ್ಷಾ ಬಂಧನದ ಶುಭಾಶಯಗಳು
ಸುಜಾತಾ ರವೀಶ್,ಮೈಸೂರು
ನನ್ನ ಕವನ ಪ್ರಕಟಿಸಿದ್ದಕ್ಕೆ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು
ಸುಜಾತಾ ರವೀಶ್
LikeLiked by 1 person