ಗರಬಡಿದ ಗಮಾರರಿಗೇನು ಗೊತ್ತು
ಚಿಗುರೊಡೆವ ಚಂದದಾ ಗಮ್ಮತ್ತು
ಬೆಳೆಸುವಾ ಎಲ್ಲರೂ ಎಳೆಸಸಿ ನೆಟ್ಟು
ಬಲಿತಾಗ ಹಾಕದಿರು ಕೊಡಲಿಪೆಟ್ಟು
ಜೀವಿಸಲು ಜೀವದುಸಿರು ನಮಗಿತ್ತು
ಪಶು-ಪಕ್ಷಿಗೆ ನೆಲೆಯಾಗಿ ನೆರಳನಿತ್ತು
ಬಿಸಿಲನುಂಡು,ತಂಪು ತಂಗಾಳಿಯಿತ್ತು
ಇರುವ ಸಸ್ಯಸಂಕುಲವನು ಕಾಪಿಟ್ಟು
ಹಿತವಾಗಿರೋಣ ಇಲ್ಲಸಲ್ಲದ್ದು ಬಿಟ್ಟು
ಅಭಿವೃದ್ಧಿ ಎಲ್ಲಿದೆ ಪರಿಸರವೃದ್ಧಿ ಬಿಟ್ಟು
ಇರಬೇಕಾದೀತು ಸಿಲಿಂಡರ್ ಬೆನ್ನಿಗಿಟ್ಟು….
ಶಿವಾನಂದ ನಾಗೂರ,
ಶಿಕ್ಷಕರು,ಧಾರವಾಡ.
ಹೇಗೆ ಹೇಳಿದರು ಮರ ಕಡಿಯೋದ ಬಿಡಲ್ಲ ಮನೆ ಕಟ್ಟೋದ ಬಿಡಲ್ಲ, ಹಸಿರು ಉಸಿರು ಕೊಟ್ಟರೇನು ಹೆಸರು ಹೇಳಲು ಮನೆ ಬೇಕು ಎನ್ನುವಾಗ ಜನಕ್ಕೆ ಅರ್ಥ ಮಡಸಲಿಕ್ಕೆ ಕೊರೋನಾನೆ ಮತ್ತೆ ಮತ್ತೆ ಹುಟ್ಟಿ ಬರಬೇಕು. ಗಮಾರನಿಗೇನುಗೊತ್ತು ಚಿಗುರಿನ ಗಮ್ಮತ್ತು 👌ಸರ್
LikeLiked by 1 person
ನನ್ನ ಕವನವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು 🎊🌹🎉🙏
LikeLiked by 1 person