ಬೆಳಕು.!

ದೇವರಮನೆಯಲಿ
ಪರಮಾತ್ಮನೆದುರು
ಹಚ್ಚಿಟ್ಟು ಉರಿಸುವ
ತೈಲದಾ ದೀಪ
ಪ್ರಾರ್ಥನೆಗೆ ಪ್ರೇರಣ.!

ಎದೆಯಗೂಡಿನಲಿ
ಅಂತರಾತ್ಮನೆದುರು
ಹಚ್ಚಿಟ್ಟು ಉರಿಸುವ
ಅರಿವಿನಾ ದೀಪ
ಪರಿವರ್ತನೆಗೆ ಕಾರಣ.!

       

ಮೌಲ್ಯ..!

ನಾಲಿಗೆಯಲ್ಲಾಡುವ ತತ್ವಕ್ಕೆ
ಸಿಗಬೇಕೆಂದರೆ ಮಹತ್ವ..
ಎದೆಯಲ್ಲಿರಲೇಬೇಕು ಸತ್ವ
ನಡೆಯೊಂದಿಗಿರಲೇಬೇಕು..
ನಿತ್ಯವೂ ಸತ್ಯದ ಸಹಭಾಗಿತ್ವ.!

✍️ ಎ.ಎನ್.ರಮೇಶ್. ಗುಬ್ಬಿ.