ಲೇಖಕರಾದ ಶ್ರೀಪ್ರಮೋದ ಕರಣಂ ಇವರ ಚೊಚ್ಚಲ ಕಾದಂಬರಿ ‘ಸಾಧ್ಯ ಅಸಾಧ್ಯಗಳ ನಡುವೆ’ ದಿನಾಂಕ:17-12-2020 ರಂದು ಕಲ್ಬುರ್ಗಿಯಲ್ಲಿ ಈ ಭಾಗದ ಖ್ಯಾತ ಸಾಹಿತಿ ಗಳಾಗಿರುವ ಪ್ರೊ.ವಸಂತ ಕುಷ್ಟಗಿ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ,ಪ್ರೊ. ವಸಂತಕುಷ್ಟಗಿರವರು “ನಾನು ಓದಿದ ಕಾದಂಬರಿಗಳಲ್ಲಿ ತ.ರಾ.ಸು. ರವರ ಮಸಣದ ಹೂವು ಕಾದಂಬರಿ ನನಗೆ ತುಂಬ ಇಷ್ಟವಾಗಿದ್ದು, ಅದರ ನಂತರ ಇದೇ ಕಾದಂಬರಿ ನನಗೆ ತುಂಬ ಇಷ್ಟವಾಗಿದೆ ” ಎಂಬ ತಮ್ಮಮೆಚ್ಚುಗೆಯ ನುಡಿಗಳೊಂದಿಗೆ ಹಾರೈಸಿರುತ್ತಾರೆ.
ಈಗಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿ ಯಾಗುತ್ತಿರುವುದು.ಅದರಲ್ಲಿಯೂ ಹೆಣ್ಣು ಮಕ್ಕಳು ಈ ಒಂದು ದುಶ್ಚಟಗಳಿಗೆ ಬಲಿ ಯಾಗುತ್ತಿರುವುದು,ಸಮಾಜ ಯಾವ ದಿಕ್ಕಿನ ಕಡೆಗೆ ಹೋಗ್ತಾ ಇದೆ ಅಂತ ಯೋಚಿಸೋ ಹಾಗೆ ಮಾಡಿದೆ. ಇಂದಿನ ತಲೆಮಾರಿನ ಯುವಕ-ಯುವತಿಯರ ಬದುಕಿನ ಚಿತ್ರಣ ವನ್ನುಆಪ್ತಶೈಲಿಯಲ್ಲಿ ತೆರೆದಿಡುವಲೇಖಕರು ತಾವು ಕಂಡುಂಡ ಚಿತ್ರಗಳನ್ನೇ ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟಿರುವುದರಿಂದ,ಕಾದಂ ಬರಿ ನೈಜವಾಗಿದೆ ಮತ್ತು ನಮ್ಮೆಲ್ಲರ ಅನು ಭವದಂತೆಯೂ ಕಾಣುತ್ತದೆ. ಹೊಸಪೇಟೆ ಹಾಗೂ ಕಲ್ಬುರ್ಗಿಯಲ್ಲಿ ಕೌಟುಂಬಿಕ ಕಟ್ಟು ಪಾಡುಗಳ ನಡುವೆ ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ,ನೌಕರಿಗಾಗಿ ಬೆಂಗಳೂರಿಗೆ ಬರುವ ಲೇಖಕರಿಗೆ ಅಲ್ಲಿ ಕೆಲವು ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಯುವಕರೊಂದಿಗೆ ಯಾವುದೇ ಮುಚ್ಚುಮರೆ ಸಂಕೋಚ ಹಾಗೂ ಹಿಂಜರಿಕೆ ಯಿಲ್ಲದೆ ಸಿಗರೇಟುಸೇದುವುದನ್ನು ನೋಡಿ ದಂಗಾಗಿ, ಮುಂದೆ ಅದೇ ಕಾದಂಬರಿಯ ಕಥೆಗೆ ಬುನಾದಿಯಾಗಿದೆ ಎಂದು ಲೇಖಕರು ಹೇಳಿದ್ದಾರೆ.ಹಾಗೂ ಲೇಖಕರು ಹೇಳುವಂತೆ
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ”ಎಲ್ಲಿ ನಾರಿಯರು ಪೂಜಿಸ ಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸು ತ್ತಾರೆ.ಕೆಟ್ಟ ಮಗನನ್ನು ನೋಡಿದ್ದೇವೆ,ಕೆಟ್ಟ ಮಗಳ ನ್ನು ನೋಡಿದ್ದೇವೆ,ಕೆಟ್ಟ ತಂದೆನು ನೋಡಿದ್ದೇ ವೆ, ಆದರೆ ಕೆಟ್ಟತಾಯಿ ಇರುವುದು ಅಸಾಧ್ಯ ದ ಮಾತು ಎಂದುಕೊಳ್ಳುತ್ತಿರುವಾಗಲೇ, ಈಗಿನ ತಲೆಮಾರಿನ ಯುವತಿಯರು ದುಶ್ಚ ಟಗಳಿಗೆ ಬಲಿಯಾಗಿರುವುದನ್ನು ನೋಡಿದರೆ ಮುಂದೆ ಇವರೇತಾಯಂದಿರಾದಾಗ ಭವಿಷ್ಯ ದಲ್ಲಿ ಆ ಅಸಾಧ್ಯದ ಮಾತು ಸಾಧ್ಯವಾಗಿ, ಕೆಟ್ಟ ತಾಯಿಯನ್ನು ನೋಡುವ, ಕೆಟ್ಟದಿನ ಗಳು ಬರಬಹುದೇ?ಎಂಬ ಆಲೋಚನೆ ಈ ಕಾದಂಬರಿಯನ್ನು ಓದಿದ ನಂತರ ಖಂಡಿತಾ ಬರುತ್ತದೆ.
ವಿದೇಶಿ ಸಂಸ್ಕೃತಿಯ ಬಿರುಗಾಳಿ ನಮ್ಮ ಸಂಸ್ಕೃತಿಗಳನ್ನು ನಿಧಾನವಾಗಿ ನುಂಗುತ್ತಾ ಸರ್ವನಾಶ ಮಾಡುತ್ತಿದೆಯಾ? ಎನ್ನುವ ಪ್ರಶ್ನೆಕೂಡ ಕೃತಿಯನ್ನು ಓದುವಾಗ ಕಾಡದೇ ಇರದು.ಇನ್ನು ಈ ಕಾದಂಬರಿಯ ಬಗ್ಗೆಹೇಳು ವುದಾದರೆ, ಕಥಾನಾಯಕ ಗಣೇಶ್ ದುಶ್ಚಟ ಗಳಿಗೆ ಬಲಿಯಾಗಿರುವ ಪ್ರಕೃತಿ ಎಂಬ ಯುವತಿಯನ್ನು ಭೇಟಿಯಾಗುತ್ತಾನೆ. ಮಾತ ನಾಡಿಸುತ್ತಾ ತಿಳಿಯುತ್ತದೆ,ಪ್ರಕೃತಿಯ ದುಶ್ಚ ಟಗಳಿಂದಾಗಿ ಅವಳ ಕನಸು ನನಸಾಗದೆ ಇರುವುದು ಹಾಗೂ ಆಕನಸುಗಳಿಗೆ ಅಡ್ಡಿಪ ಡಿಸಿದ್ದು ಅವರ ಮನೆಯವರು ಎನ್ನುವುದು.
ಮತ್ತೆ ಇನ್ನೊಂದು ಶಾಕಿಂಗ್ ಅಂದರೆ ಪ್ರಕೃ ತಿಗೆ ಡ್ರಗ್ಸ್ ನೀಡಿ ತೆಗೆದುಕೊಳ್ಳಲು ಪ್ರೋತ್ಸಾ ಹಿಸಿದ್ದು, ಗಣೇಶನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಹಾಗೂ ಇನ್ನೊಬ್ಬ ಡ್ರಗ್ಸ್ ಅಡಿಕ್ಟ್ ಯುವತಿ ರುಚಿ.
ಹೀಗೆ ಪ್ರಕೃತಿ ಡ್ರಗ್ಸ್ ಗೆ ಅಡಿಕ್ಟ್ಆಗುತ್ತಾಳೆ, ಅವಳ ಕನಸುಗಳು ನನಸಾಗುತ್ತವೆಯೇ? ಹಾಗೂ ರುಚಿಗೆ ಏನಾಗುತ್ತದೆ? ಬದುಕಿನ ಸಾಧ್ಯ-ಅಸಾಧ್ಯಗಳ ನಡುವಿನ ಪೈಪೋಟಿ ಯಲ್ಲಿ ಸಾಧ್ಯತೆ ಕಡೆಗೆ ಹೆಜ್ಜೆ ಊರುವ ಗಣೇಶನ ಪ್ರಯತ್ನ ಸಫಲವಾಗುವುದೇ? ಇವರೆಲ್ಲರ ಬದುಕು ಯಾವ ತಿರುವು ಪಡೆ ಯುತ್ತದೆ ಎನ್ನುವುದು ಕತೆಯ ಅಂತರಾಳ.
ಒಂದೇ ದಿನದಲ್ಲಿ ಓದಬಹುದಾದ ಉತ್ತಮ ಪರಿಕಲ್ಪನೆಯ ಕೃತಿಯೇ ಇದಾಗಿದ್ದು ಸಾಮಾ ಜಿಕ ಪಿಡುಗನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದಿರುವ ಲೇಖಕರ ಪ್ರಯತ್ನ ಮೆಚ್ಚು ಗೆಯಾಗುತ್ತದೆ.ಪ್ರತಿಯೊಬ್ಬರು ಓದಿ ಸಂಗ್ರಹಿ ಸಿಟ್ಟುಕೊಳ್ಳಬೇಕಾದಂತಹ ಕಾದಂಬರಿ ಇದಾ ಗಿದೆ.
ಲೇಖಕರು: ಪ್ರಮೋದ್ ಕರಣಂ
ಪ್ರಕಾಶಕರು: ಶಾಶ್ವತ ಪಬ್ಲಿಕೇಶನ್
ಬೆಲೆ : ರೂ.180-00 ಅಂಚೆವೆಚ್ಚ ಉಚಿತ
ದೊರೆಯುವ ಸ್ಥಳ: 9743224892 ಗೆ ವಾಟ್ಸಪ್ಪ್ ಮಾಡಿ ಮನೆಬಾಗಿಲಿಗೆ ಪಡೆಯಿರಿ
ರಾಜಶ್ರೀ ಆರ್.ಕಲ್ಬುರ್ಗಿ