ಒಂದು ವರ್ಷದಹಿಂದೆ ಕೋವಿಡ್ ವಿಚಾರದ ಬಗ್ಗೆ ನಮಗೆ ಬಹುತೇಕ ಏನೂ ತಿಳಿದಿರಲಿಲ್ಲ ಅದೊಂದು ವಿಶ್ವವ್ಯಾಪಿ ಹೊಸವ್ಯಾಧಿಯಾ ಗಿತ್ತು.ಒಂದೂ ಕಾಲುವರ್ಷದಲ್ಲಿ ಈ ವ್ಯಾಧಿ ಯ ಬಗ್ಗೆ ನಾವು ಒಂದಷ್ಟು ವಿಚಾರಗಳನ್ನು ಅರಿತುಕೊಂಡಿದ್ದೇವೆ.ಕೆಲವು ವಿಚಾರಗಳಲ್ಲಿ ಕೋವಿಡ್ ಹೀಗೇ ವರ್ತಿಸುತ್ತದೆ ಎಂದು ಕೂಡ ಹೇಳಬಹುದಾಗಿದೆ. ಅದನ್ನು ತಡೆಯ ಬಲ್ಲ ಲಸಿಕೆಗಳೂ ಈಗ ಲಭ್ಯವಿವೆ.
ಕೋವಿಡ್ ನಿಯಮಗಳನ್ನು ಸ್ವಲ್ಪ ಸಡಿಲಿಸಿ ದರೂ ಅದು ನಮ್ಮ ನಡುವೆ ಜಿಗಿಯುತ್ತ ಮತ್ತೆ ಬಲಿಷ್ಠವಾಗುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದದ್ದೇ. ಆದರೆ, ಜನರ ಒತ್ತಾಯಕ್ಕೆ ಮಣಿದ, ಭಾರತ ಸರ್ಕಾರ ಬಹುತೇಕ ಚಟುವಟಿಕೆಗಳನ್ನು ಮತ್ತೆ ಶುರು ಮಾಡಿತು.ಜಾತ್ರೆ, ಸಿನಿಮಾ,ಹೋಟೆಲುಗಳು ಶುರುವಾಗಿ ಬದುಕು ಮತ್ತೆ ಹರಡಿತು ಎನ್ನು ವಷ್ಟರಲ್ಲಿ ಕೋವಿಡ್ ಕಾಳ್ಗಿಚ್ಚು ಭಾರತದಲ್ಲಿ ಮತ್ತೆ ಹರಡುತ್ತಿದೆ.ಏಪ್ರಿಲ್ ಎರಡನೇ ವಾರ ದಲ್ಲಿ ದಿನವೊಂದರಲ್ಲಿ ಸರಾಸರಿ ಒಂದು ಲಕ್ಷಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ಸತತ ಮೂರು ದಿನಗಳು ದಾಖಲಾಗಿವೆ. ಪ್ರತಿದಿನ ಸರಾಸರಿ ಐನೂರಕ್ಕೂ ಹೆಚ್ಚು ಜನರು ವಿಧಿ ವಶರಾಗಿದ್ದಾರೆ. ಇದು ಭಾರತದ ಕೋವಿಡ್ ಇತಿಹಾಸದಲ್ಲಿ ದಿನವೊಂದಕ್ಕೆ ದಾಖಲಾದ ಅತ್ಯಂತ ಹೆಚ್ಚಿನ ಸೋಂಕಿನ ದಾಖಲೆಯೂ ಆಗಿದೆ.
ಖ್ಯಾತ ಕ್ರಿಕೆಟ್ ಆಟಗಾರರು, ಸಿನಿಮಾ ತಾರೆ ಯರು, ರಾಜಕಾರಣಿಗಳು ಒಬ್ಬೊಬ್ಬರಾಗಿ ಪ್ರತಿ ದಿನ ಈ ಎರಡನೇ ಅಲೆಯ ಕೋವಿಡ್ ಗೆ ಬಲಿಯಾಗಿ ಸುದ್ದಿ ಮಾಡುತ್ತಲೇ ಇದ್ದಾರೆ. ಆದರೆ ದಟ್ಟವಾಗಿ ಹರಡುತ್ತಿರುವ ಈ ಕೋವಿಡ್ ಅಲೆಯ ನಡುವೆ ಕೋವಿಡ್ ಲಸಿಕೆಯ ಭರವಸೆ ಜನರನ್ನು ಪೊರೆಯು ತ್ತಿದೆ. ಸುಮಾರು ಎಂಟು ಕೋಟಿ ಜನರಿಗೆ ಈವರೆಗೆ ಮೊದಲವ್ಯಾಕ್ಸಿನ್ ಡೋಸ್ ದೊರ ಕಿದೆ. ಈಗ ೪೫ ವಯಸ್ಸು ಮೇಲ್ಪಟ್ಟವರಿ ಗೆಲ್ಲ ವ್ಯಾಕ್ಸಿನ್ ನೀಡುವ ಪ್ರಯತ್ನಗಳಾಗು ತ್ತಿವೆ. ಜನರು ಎಚ್ಚರ ತಪ್ಪಿದ ಕಾರಣ ಕೋವಿಡ್ ವ್ಯಾಕ್ಸಿನ್ ದೊರಕುತ್ತಿರುವ ಈ ಸಮಯದಲ್ಲೇ ಭಾರತ ಅತ್ಯಂತ ಬಲವಾದ ಕೋವಿಡ್ ನ ಎರಡನೇ ಅಲೆಯನ್ನು ಎದುರಿ ಸುತ್ತಿರುವುದು ಅತ್ಯಂತ ದುರದೃಷ್ಟಕರ. ಕೋವಿಡ್ ವ್ಯಾಕ್ಸಿನ್ ಬಗ್ಗೆ ಕೆಲವುವಸ್ತುನಿಷ್ಠ ವಿಷಯಗಳ ಅರಿವು ಜನರಿಗಿರಬೇಕಾದ್ದು ಅತ್ಯಂತ ಅಗತ್ಯ. ವ್ಯಾಕ್ಸಿನ್ ಬಗ್ಗೆ ಹೆದರುವ ಅಗತ್ಯವಿಲ್ಲ. ಅಂತೆಯೇ ವ್ಯಾಕ್ಸಿನ್ ಬಗ್ಗೆ ಇಲ್ಲ ಸಲ್ಲದ ಭರವಸಗಳನ್ನು ಇಡುವುದು ಕೂಡ ಅಪಾಯಕರ.
ಇತ್ತೀಚೆಗೆ ವ್ಯಾಕ್ಸಿನ್ ನ ಮೊದಲ ಅಥವಾ ಎರಡೂ ಡೋಸ್ ಪಡೆದ ನಂತರ ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರು ವುದು ಮತ್ತೊಂದು ಬಗೆಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ. ವಾಟ್ಸಾಪ್ ಮುಂತಾದ ತಾಣಗಳಲ್ಲಿ ‘ಪೆಲ್ಟಮ್ಯಾನ್ ಎಫೆಕ್ಟ್’ ಎನ್ನುವ ಸಿದ್ಧಾಂತದ ಬಗ್ಗೆ ಚರ್ಚೆ ನಡೆಯು ತ್ತಿದೆ. Sam peltzman ಎಂಬಾತ ಚಿಕಾಗೊನಲ್ಲಿ ೧೯೮೮ ರಲ್ಲಿ ಮೈಕ್ರೊಎಕನಾ ಮಿಕ್ಸ್ ಹೇಳಿಕೊಡುತ್ತಿದ್ದ ವ್ಯಕ್ತಿ. ಆತ ಹೇಳಿ ದ್ದೇನೆಂದರೆ, ಕೆಲವು ಭದ್ರತೆಗಳು ಜನರಿಗೆ ಸಿಕ್ಕ ಕೂಡಲೇ ಅವರಲ್ಲಿ ಅಪಾಯವನ್ನು ಎದುರಿಸುವ ಧೈರ್ಯ ಹೆಚ್ಚಾಗುವ ಸಂಭವ ನೀಯತೆಯ ಬಗ್ಗೆ ಆತ ತತ್ವವೊಂದನ್ನು ಪ್ರತಿಪಾದಿಸಿದ. ಉದಾಹರಣೆಗೆ ಹೆಲ್ಮೆಟ್ ಹಾಕಿದ ನಂತರ ಬೈಕ್ ನ್ನು ಅತ್ಯಂತ ವೇಗ ವಾಗಿ ಓಡಿಸುವುದು, ಸೀಟ್ ಬೆಲ್ಟ್ ಹಾಕಿ ಕೊಂಡಿದ್ದೇನೆ ಎನ್ನುವ ಹುಂಬ ಧೈರ್ಯದಲ್ಲಿ ಎಡ್ಡಾದಿಡ್ಡಿ ವಾಹನಗಳನ್ನು ಓಡಿಸಿ ಆಕ್ಸಿಡೆಂಟ್ ಗಳು ಹೆಚ್ಚಾಗುವುದು -ಇತ್ಯಾದಿ ವಿಚಾರಗಳನ್ನು ಈತನ ತತ್ವ ಹೇಳುತ್ತದೆ.
ಅಂದರೆ, ಒಂದಿಷ್ಟು ಭದ್ರತೆ ಸಿಕ್ಕಕೂಡಲೇ ಜನರು ತಾವು ವಹಿಸಬೇಕಾದ ಎಚ್ಚರಿಕೆಗ ಳನ್ನು ಗಾಳಿಗೆ ತೂರಿ, ಮೈಮರೆತು ಅಪಾ ಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ವಾಲಿಕೆಯನ್ನು ತೋರುತ್ತಾರೆ. ಅಲ್ಲಿ ಬದಲಾ ಗುವುದು ಅಪಾಯವನ್ನು ಆಹ್ವಾನಿಸುವ ಜನರ ವರ್ತನೆಯೇ ಹೊರತು, ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ನಿಂದ ಯಾವ ಪ್ರಯೋಜನವೂ ಇಲ್ಲವೆಂದಲ್ಲ. ಪ್ರಾಣವೇ ಹೋಗುವ ಕಡೆ, ಜೀವ ಉಳಿಯುವ ಸಾಧ್ಯ ತೆಯನ್ನು ಈ ಉಪಕರಣಗಳು ಕಲ್ಪಿಸಿ ಅಲ್ಪ ಸ್ವಲ್ಪ ಭದ್ರತೆಯನ್ನು ಒದಗಿಸಬಲ್ಲವೇ ಹೊರತು ಅಪಘಾತ ನಡೆಯದಂತೆ ಜನರು ಎಚ್ಚರವಹಿಸದಿದ್ದಲ್ಲಿ ಅವು ನಿಷ್ಪ್ರಯೋಜಕ ವಾಗುತ್ತವೆ. ಈ ವಿಚಾರವನ್ನು ನಾವು ಕೋವಿಡ್ ಲಸಿಕೆಯ ವಿಚಾರಕ್ಕೂ ಅನ್ವಯಿ ಸಿಕೊಳ್ಳಬಹುದು. ಲಸಿಕೆ ಸಿಕ್ಕ ಕೂಡಲೇ ಕೋವಿಡ್ ಬರುವುದಿಲ್ಲವೆಂದಲ್ಲ. ಎರಡು ಡೋಸ್ ಲಸಿಕೆಯ ನಂತರವೂ ಕೋವಿಡ್ ನಿಯಮಗಳನ್ನು ಪಾಲಿಸದಿದ್ದರೆ ಸುಲಭ ವಾಗಿ ಕೋವಿಡ್ ಬರಬಹುದು.ಕೋವಿಡ್ ವಿಚಾರದಲ್ಲಿ ಈಗ ಲಸಿಕೆಯ ಲಭ್ಯತೆ ಇದೆ ಯಾದರೂ ಎಂದಿನಂತೆ ಎಚ್ಚರಿಕೆಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮುಂದುವರೆಸುವ ಅವಶ್ಯಕತೆಯಿದ್ದೇ ಇದೆ. ಮೈ ಮರೆಯುವಂತಿಲ್ಲ. ನೆನಪಿಟ್ಟುಕೊಳ್ಳ ಬೇಕಾದ ವಿಚಾರಗಳು ಬದಲಾಗಿಲ್ಲ. ಜೊತೆಗೆ ಇನ್ನಷ್ಟು ವಿಚಾರಗಳನ್ನು ಮನನ ಮಾಡಿಕೊಳ್ಳುವುದು ಕೂಡ ಅಗತ್ಯವಾಗಿದೆ.
೧) ವ್ಯಾಕ್ಸಿನ್ ನಿಂದಕೋವಿಡ್ ಬರುವುದಿಲ್ಲ
೨) ಒಂದು ಡೋಸ್ ಪಡೆದವರಲ್ಲಿ ಪೂರ್ಣ ಪ್ರಮಾಣದ ಪ್ರತಿರೋಧಕ ಶಕ್ತಿಯಿರುವುದಿಲ್ಲ.
೩) ಎರಡೂ ಡೋಸ್ ಗಳು ದೊರಕಿದ ನಂತರ ಜನರಲ್ಲಿ ಕೋವಿಡ್ ವಿರುದ್ಧ ಬಲವಾದ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. ಆದರೆ, ಅದು ಪ್ರತಿಶತ ನೂರರಷ್ಟು ರಕ್ಷಣೆ ಒದಗಿಸುವುದಿಲ್ಲ. ಆದ್ದರಿಂದ ಎಚ್ಚರ ತಪ್ಪಿದರೆ ಆಗಲೂ ಕೋವಿಡ್ ಬರಬಲ್ಲದು.
೪) ಎರಡೂ ಡೋಸ್ ಪಡೆದವರಲ್ಲಿ ಕೂಡ ಹಲವಾರು ವಾರಗಳ ಕಾಲ ಪ್ರತಿರೋಧಕ ಶಕ್ತಿ ಬೆಳೆದಿರುವುದಿಲ್ಲ. ಇದೇ ಕಾರಣಕ್ಕೆ ಎರಡನೇ ಡೋಸ್ ಸಿಕ್ಕ ಮರುದಿನವೇ ಕೋವಿಡ್ ಪಾಸಿಟಿವ್ ಎನ್ನುವಂತ ವಿಚಾರ ಗಳನ್ನು ನಾವು ಓದುತ್ತೇವೆ.
೫) ಯಾವ ಲಸಿಕೆಗಳಿಂದಲೂ ಪ್ರತಿಶತ ಕೋವಿಡ್ ನಿರೋಧಕ ಶಕ್ತಿ ಬರುವುದಿಲ್ಲ.
೬) ಒಂದಷ್ಟು ಶಕ್ತಿ ಬಂದರೂ ಒಂದಾರು ತಿಂಗಳುಗಳಿಗಿಂತ ಹೆಚ್ಚಾಗಿ ಅದು ಉಳಿಯ ದಿರಬಹುದು. ಒಂದಾರು ತಿಂಗಳ ನಂತರ ಬೂಸ್ಟರ್ ಡೋಸ್ ಬೇಕಾಗಬಹುದು.
೭) ಕೋವಿಡ್ ಲಸಿಕಯನ್ನು ಪ್ರತಿ ವರ್ಷ ಕೊಡುವ ಪರಿಪಾಟವನ್ನು ಪಾಲಿಸಬೇಕಾಗ ಬಹುದು.ಈ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.
೮) ಭಾರತದ ಬೃಹತ್ ಸಂಖ್ಯೆಯ ಜನರಿಗೆ ಎರಡೆರಡು ಲಸಿಕೆ ಸಿಗಲು ಇನ್ನೂ ಬಹಳ ಕಾಲ ಬೇಕು. ಅಲ್ಲಿಯವರೆಗೆ ನಮ್ಮ ದೇಶ ಕೋವಿಡ್ ಮುಕ್ತವಾಗುವುದಿಲ್ಲ. ಪ್ರಪಂಚದ ಪ್ರತಿ ದೇಶದಿಂದ ಕೋವಿಡ್ ಉಚ್ಛಾಟಣೆ ಯಾಗುವುದು ಸುಲಭವಾದ ವಿಚಾರವಲ್ಲ. ಅಲ್ಲಿಯವರೆಗೆ ಕೋವಿಡ್ ಎಚ್ಚರಿಕೆಗಳು ಜಾರಿಯಲ್ಲಿರಲೇ ಬೇಕು. ಈ ವಿಚಾರ ಅತ್ಯಂತ ಕಟುವಾದ ಸತ್ಯ.ಇದನ್ನು ಪ್ರಪಂಚ ದ ಎಲ್ಲರೂ ಒಂದಾಗಿ ಎದುರಿಸಲೇಬೇಕಾ ಗಿದೆ. ಲಸಿಕೆ ಒಂದು ಪ್ರಮಾಣದ ಸುರಕ್ಷತೆ ಯನ್ನು ಒದಗಿಸಿದರು,ಅದು ಪೂರ್ಣಪ್ರಮಾ ಣದ್ದಾಗಿರುವುದಿಲ್ಲ ಎನ್ನುವ ಎಚ್ಚರಿಕೆಯ ಜೊತೆಗೇ ನಮ್ಮ ಬದುಕು ಮುಂದುವರೆಯ ಬೇಕಾಗಿದೆ.
೯) ಲಸಿಕೆಯನ್ನು ತೆಗೆದುಕೊಳ್ಳದಿದ್ದಲ್ಲಿ ಕೋವಿಡ್ ಅಪಾಯ ನೂರಕ್ಕೆ ನೂರು ನಿಜವಾಗಿರುತ್ತದೆ.ಅದರಿಂದತಪ್ಪಿಸಿಕೊಳ್ಳಲು ಸದಾ ಜಾಗೃತರಾಗಿರಬೇಕಾಗುತ್ತದೆ. ಆದರೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹೆದರಿಕೆಯಲ್ಲೇ ಬದುಕಬೇಕಾ ಗುತ್ತದೆ. ಲಸಿಕೆಗಳು ಶೇಕಡಾ ೭೦ಕ್ಕೂ ಹೆಚ್ಚಿನ ರಕ್ಷಣೆಯನ್ನು ಒದಗಿಸಬಲ್ಲವು.
ಆದರೆ ಲಸಿಕಗಳಿಂದ ಕೂಡ ಕೆಲವು ದುಷ್ಪರಿ ಣಾಮಗಳು ಪಟ್ಟಿಯಾಗಿವೆ. ಹೊಸ ದುಷ್ಪರಿ ಣಾಮಗಳು ದಾಖಲಾಗುತ್ತಿವೆ.
ಉದಾಹರ ಣೆಗೆ, ಆಸ್ಟ್ರಾಜೆನಿಕಾ ಲಸಿಕೆ ಕೆಲವರ ರಕ್ತ ನಾಳಗಳಲ್ಲಿ ರಕ್ತದ ಗಡ್ಡೆಗಳನ್ನು ಸೃಷ್ಟಿಸಬ ಲ್ಲದು ಎನ್ನುವ ವಿಚಾರ ಯೂರೋಪು ಮತ್ತು ಯು.ಕೆ.ಯಲ್ಲಿ ವಿಸ್ತೃತವಾದ ಚರ್ಚೆ ಯಾಯಿತು. ಲಸಿಕೆ ಪಡೆದ ಲಕ್ಷಾಂತರ ಜನ ರಲ್ಲಿ ೭೯ ಜನರಲ್ಲಿ ರಕ್ತದ ಗಡ್ಡೆ ಕಾಣಿಸಿದ್ದು, ೧೯ ಜನರು ಸತ್ತಿದ್ದು ಧೃಡವಾಯಿತು. ಅದರಲ್ಲೂ ಇದು ಮಹಿಳೆಯರಲ್ಲೇ ಅಧಿಕ ವಾಗಿ ಕಾಣಿಸಿತು. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಆ ಬ್ರಾಂಡಿನ ಲಸಿಕೆಗಳನ್ನು ಯಾವ ಖಾಯಿಲೆಯೂ ಇಲ್ಲದ ಮೂವತ್ತು ವರ್ಷದೊಳಗಿನವರಿಗೆ ನೀಡದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಆದರೆ ಈ ಸೈಡ್ ಎಫೆಕ್ಟ್ ಸಾವಿರಾರು ಮೈಲು ವಿಮಾನ ಪ್ರಯಾಣ ಮಾಡಿದರೆ ಅಥವಾ ಮಕ್ಕಳಾಗದಂತೆ ಮಹಿಳೆಯರು ತೆಗೆದುಕೊಳ್ಳುವ ಸಂತಾನ ನಿರೋಧಕ ಗುಳಿಗೆಗಳಿಂದ ಆಗುವ ರಕ್ತದ ಗಡ್ಡೆಗಳ ಅಪಾಯಕ್ಕೆ ಹೋಲಿಸಿದರೆ ಒಂದು ಭಾಗದಷ್ಟು ಕೂಡ ಅಪಾಯಕಾರಿಯಲ್ಲ ಎಂಬ ವಿಚಾರವನ್ನು ಸರ್ಕಾರ, ಜನರಿಗೆ ತಿಳಿಸಿ ಭರವಸೆ ನೀಡಿದೆ.
ಹಾಗೆ ನೋಡಿದರೆ, ಪ್ರಪಂಚದ ಯಾವ ಲಸಿಕೆಯೂ ಪೂರ್ಣ ಪ್ರಮಾಣದ ರಕ್ಷಣೆ ಯನ್ನು ನೀಡುವುದಿಲ್ಲ. ಪ್ರತಿಯೊಂದಕ್ಕೂ ಅದರದೇ ಆದ ಸೈಡ್ ಎಫೆಕ್ಟ್ ಗಳು ಕೂಡ ಇವೆ. ಕೋವಿಡ್ ಲಸಿಕೆಯೂ ಇದಕ್ಕೆ ಹೊರತಲ್ಲ. ಆದರೆ ಪ್ರತಿಯೊಂದು ಲಸಿಕೆ ಗಳಿಂದ ಮನುಷ್ಯ ಕುಲಕ್ಕೆ ಅಪಾರವಾದ ಲಾಭವಾಗಿದೆ. ಕೋಟ್ಯಾಂತರ ಜನರ ಜೀವ ಉಳಿದಿದೆ. ಕೋವಿಡ್ ಲಸಿಕೆಯ ವಿಚಾರ ದಲ್ಲೂ ಇದು ಸತ್ಯವಾಗಲಿದೆ.
೧೦) ಆದರೆ ಹಲವಾರು ಕೋವಿಡ್ ಲಸಿಕೆ ಗಳನ್ನು ವರ್ಷವೊಂದರಲ್ಲಿ ಮಾರುಕಟ್ಟೆಗೆ ತಂದು ದೀರ್ಘಕಾಲದ ಅಧ್ಯಯನವಿಲ್ಲದೆ ಜನ ಸಾಮಾನ್ಯರಿಗೆ ನೀಡುತ್ತಿರುವ ಬಗ್ಗೆ ಜನರಲ್ಲಿ ಆತಂಕವಿದೆ. ಪೂರ್ಣ ಪ್ರಮಾಣದ ಮಾಹಿತಿಯಿಲ್ಲದ ಕಾರಣ ಎಲ್ಲರಲ್ಲೂ ಒಂದು ಬಗೆಯ ಆತಂಕ ಮನೆಮಾಡಿದೆ.
ಆದರೆ,ಕೋವಿಡ್ ಬಿಗಿಹಿಡಿತಕ್ಕೆ ಸಿಲುಕಿದಲ್ಲಿ ಆಗಬಹುದಾದ ಜೀವಹಾನಿಗೆ ಹೋಲಿಸಿದರೆ ಕೋವಿಡ್ ಲಸಿಕೆ ತೆಗೆದುಕೊಂಡರೆ ಆಗುವ ಲಾಭಗಳೇ ಅಧಿಕವಾದ ಕಾರಣ ವಿವಾದ ಗಳಿರುವ ಆಸ್ಟ್ರಾಜೆನಿಕದ ಎರಡೂ ಡೋಸ್ ವ್ಯಾಕ್ಸಿನ್ ಗಳನ್ನು ತೆಗೆದುಕೊಂಡಿದ್ದೇನೆ. ಇದರಿಂದ ಕೋವಿಡ್ ಬಂದರೆ ಆಗಬಹು ದಾದ ದುರಾದೃಷ್ಟದ ಪಾಡನ್ನು ನನ್ನ ಪ್ರಯತ್ನ ಮತ್ತು ಒಪ್ಪಿಗೆಯಿಂದ ದೂರವಿಟ್ಟ ತೃಪ್ತಿಯಂತೂ ನನಗಿರುತ್ತದೆ. ಅಕಸ್ಮಾತ್ ಕೋವಿಡ್ ಬಂದು, ಬೇರೆಯವರಿಗೆ ನನ್ನಿಂದ ಸದ್ದೇ ಇಲ್ಲದೆ ಕೋವಿಡ್ ಹರಡದಂತೆ ತಡೆದ ನೆಮ್ಮದಿಯೂ ಇರುತ್ತದೆ. ಸದ್ಯದ ಪರಿಸ್ಥಿತಿ ಯಲ್ಲಿ ಹೀಗೆ ಮಾಡಿರೆಂಬುದೇ ಪ್ರತಿ ಸರ್ಕಾರಗಳು ನಮ್ಮನ್ನು ಕೇಳುತ್ತಿರುವುದು ಕೂಡ.
ಲಸಿಕೆ ಪಡೆದರೂ ಸಧ್ಯಕ್ಕೆ ಕೋವಿಡ್ ನಿಯಮಪಾಲನೆಗಳು ಹೋಗುವುದಿಲ್ಲ. ಜನರು ಮೈ ಮರೆತರೆ ಕೋವಿಡ್ ಮತ್ತೆ ಹರಡುತ್ತದೆ. ಮತ್ತೊಂದು ವರ್ಷವಾದರು ನಾವು ಕೋವಿಡ್ ನಿಯಮಪಾಲನೆಯನ್ನು ಖಡ್ಡಾಯವಾಗಿ ಮಾಡಬೇಕಾಗುತ್ತದೆ. ಮುಂದೆಯೂ ಅಗತ್ಯಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳ ಬೇಕಾಗುತ್ತದೆ. ಅದಕ್ಕೆ ತಯಾರಿರೋಣ.
✍️ಡಾ.ಪ್ರೇಮಲತ.ಬಿ.
ದಂತವೈದ್ಯರು
ಲಂಡನ್,ಇಂಗ್ಲೆಂಡ್.
ಕೋವಿಡ್ ಲಸಿಕೆಯ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು.
LikeLiked by 1 person
ಮೇಡಮ್ ನಮಸ್ಕಾರ. ಲೇಖನ ಪ್ರಸ್ತುತ ಸಂದರ್ಭಕ್ಕೆ ತುಂಬಾ ಉಪಯುಕ್ತವಾಗಿದೆ. ನಿಮ್ಮಿಂದ ಇನ್ನೂ ಹೆಚ್ಚಿನ ಆರೋಗ್ಯ ಮಾಹಿತಿ ನಿರೀಕ್ಷೆ ಸುತ್ತ ಎ ವೆ. ಧನ್ಯವಾದಗಳು.
LikeLiked by 1 person