ಈ ಭೀಕರ ಕನಸುಗಳಿಂದ ಪಾರು ಮಾಡು ಸಾಕಿ
ಹೇಗೆ ದಿನದೂಡಲಿ ಇವುಗಳಿಂದ ಪಾರು ಮಾಡು ಸಾಕಿ
ನಿನ್ನ ಮಧುಶಾಲೆಗೆ ಇರುವಷ್ಟು ಶಕ್ತಿ ನನ್ನ ಕವಿತೆಗಿಲ್ಲ
ಆದರೂ ಕಾಡುವ ನಶೆಯಿಂದ ಪಾರು ಮಾಡು ಸಾಕಿ
ನೆಮ್ಮದಿ ಹುಡುಕಲು ಹೋಗಿ ಮತ್ತಿಷ್ಟು ನೆಮ್ಮದಿಗೆಟ್ಟೆ
ಮತಿ ಹೋಗುವ ಹುನ್ನಾರಗಳಿಂದ ಪಾರು ಮಾಡು ಸಾಕಿ
ಜೀವನದಲಿ ಮಧುವಿಗೆ ಪವಿತ್ರ ಸ್ಥಾನವಿದೆ ಬಲ್ಲೆ ನಾನು
ಆ ಜಾತ್ರೆ ಈ ಜನಜಂಗುಳಿಯಿಂದ ಪಾರು ಮಾಡು ಸಾಕಿ
ಸಂತೆಯೆಂದರೂ ಸರಿ ಚಿಂತೆಯೆಂದರೂ ಸರಿ ವ್ಯತ್ಯಾಸವಿಲ್ಲ
“ಜಾಲಿ” ಬುಧ್ಧನ ಸಾಸಿವೆ ಸುಖದಿಂದ ಪಾರು ಮಾಡು ಸಾಕಿ
🔆🔆🔆
✍️ ವೇಣು ಜಾಲಿಬೆಂಚಿ, ರಾಯಚೂರು.