ನಗೆಯೆಂಬ ಬೆಳಕು ಚೆಲ್ಲು
ಹಗೆಯ ಅಂಧಕಾರ ಮೆಲ್ಲುತ
ತಗಾದೆ,ಇರಾದೆ ಹಂಗಿಲ್ಲದೇ
ನೆಮ್ಮದಿಯ ತಾಣಕೆ ರೂಪಾಂತರಿಸಿ.
ಹತಾಶೆಯ ಕೊರಳಿಗೆ ಚೈತನ್ಯದ ದನಿ
ಚಿಂತೆಯ ಸುಟ್ಟು ಬೂದಿಯಾಗಿಸುತ
ಗೊಂದಲದ ಬೇ-ಸೂರ್ ಬೇಸರಿಸಿ
ಚೇತರಿಕೆಯ ಬಾಗೀನ ನೀಡುವಂತೆ.
ಮರಭೂಮಿಯ ಖರ್ಜೂರ ಫಲದಂತೆ
ಚೂರಾದ ಹೃದಯದಿ ಬೆಸುಗೆ ಔತಣ ಮಾಡಿ
ನಂಬಿಕೆಗೆ ಧೋಕಾ ಮಾಡಿದವರಿಗೆ ಸವಾಲೆಸೆದು
ಜಾರಿದ ಕಣ್ಣ ಹನಿಗೂ ನಾಚಿಕೆ ತಾಗಿದಂತೆ.
🔆🔆🔆
✍️ ರೇಷ್ಮಾ ಕಂದಕೂರ ಶಿಕ್ಷಕಿ, ಸಿಂಧನೂರ