1. ರೇಟು..!
ಅಡನಾಡಿ ಸಾಹಿತಿಗಳು
ಹೆಮ್ಮೆಯಲಿ ಗುಡುಗಿದರು
“ಕೊಡಿರಿ ಮರ್ಯಾದೆ
ನನ್ನ ಹೆಸರಿನ ಹಿಂದಿದೆ
ಗೌರವ ಡಾಕ್ಟರೇಟು.!”
ಕಿಲಾಡಿ ಓದುಗರೊಬ್ಬರು
ಮೆಲ್ಲ ಕೇಳಿಯೇ ಬಿಟ್ಟರು
“ಸ್ವಾಮಿ ಅದ ಪಡೆಯಲು
ಎಷ್ಟು ಕೊಟ್ಟಿರಿ ರೇಟು?”
🔅🔅🔅
2. ಮಾನ-ದಂಡ.!
ಪ್ರಶಸ್ತಿ ಆಯೋಜಕರು
ಮೆಲ್ಲಗೆ ಹೇಳಿದರು..
“ರಾಜ್ಯರತ್ನ ಐದುಸಾವಿರ
ರಾಷ್ಟ್ರರತ್ನ ಹತ್ತುಸಾವಿರ
ನಗದು ಮಾತ್ರ ಸ್ವೀಕಾರ”
ಹೌರಾರುತ ಬಡಸಾಹಿತಿ
ನಿಟ್ಟುಸುರಿಟ್ಟು ಕೇಳಿದರು..
“ಸ್ವಾಮೀ ಬೇರೇನಿದೆ
ಹೇಳಿ ಮಾನದಂಡ.?”
ಪಕ್ಕದ್ದಲ್ಲಿದ್ದ ಕೋದಂಡ
ಮುಗುಳ್ನಕ್ಕು ನುಡಿದ..
“ಧನದ ಜೊತೆಜೊತೆಗೆ
ಮಾನವಿಲ್ಲದಿರುವುದೇ
ಮುಖ್ಯ ಮಾನದಂಡ.!”
🔆🔆🔆
✍️ ಶ್ರೀ ಎ.ಎನ್.ರಮೇಶ್. ಗುಬ್ಬಿ.
ರೇಟ್ ಚೆನ್ನಾಗಿದೆ
LikeLike
ಸತ್ಯ ಈಗ ಎಲ್ಲವೂ ಮಾರಾಟಕ್ಕಿವೆ
LikeLike
ಸತ್ಯ
LikeLike
ವಾಸ್ತವ.. ನೈಸ್
LikeLike
ತಮಾಷೆಯಾದರೂ ವಾಸ್ತವಕ್ಕೆ ಅತೀ ಹತ್ತಿರವಾಗಿದೆ.
LikeLike